ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ರೆಡ್ಡಿಗಳಿಗೆ ಕೇರ್ ಮಾಡದ ಸಿಎಂ

|
Google Oneindia Kannada News

Yeddyurappa
ಬೆಂಗಳೂರು, ಅ. 26 : ನಾನು ಮುಖ್ಯಮಂತ್ರಿ, ನನ್ನ ಹುದ್ದೆಯ ಚೌಕಟ್ಟಿನಲ್ಲಿ ಅಧಿಕಾರ ಚಲಾಯಿಸಲು ನನಗೆ ಯಾವ ಅಡ್ಡಿಯೂ ಇಲ್ಲ. ತಮ್ಮ ಖಾತೆ ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಬಳ್ಳಾರಿ ರೆಡ್ಡಿಗಳ ಆರೋಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ನೇರ ಉತ್ತರವಿದು. ಉತ್ತರ ಕರ್ನಾಟಕದ ಜನರ ಬದುಕನ್ನು ಕಟ್ಟಿಕೊಡುವುದೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನತೆ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಅವರ ಬದುಕನ್ನು ಪುನರ್ ರೂಪಿಸುವುದೇ ನನ್ನ ಆಧ್ಯತೆ ಎಂದರು. ನಾನು ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಇದಕ್ಕೆ ದೇವರು ಮತ್ತು ಜನತೆಯ ಬೆಂಬಲವಿದೆ. ನನ್ನ ಅಧಿಕಾರ ಚೌಕಟ್ಟಿನಲ್ಲಿ ನಾನು ಅಧಿಕಾರ ಚಲಾಯಿಸಿರುವೆ. ಇದರಿಂದಾಗಿ ಯಾವ ಸಮಸ್ಯೆಯಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸಚಿವ ಸಂಪುಟ ಒಗ್ಗಟ್ಟಾಗಿದೆ. ಮಾಧ್ಯಮಗಳಲ್ಲಿ ಬರುವುದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಲ್ಲಿ ಸತ್ಯಾಂಶ ಕಡಿಮೆ. ಬಳ್ಳಾರಿ ಸಚಿವರ ಜೊತೆ ನಿಕಟ ಸಂಪರ್ಕ ಇದೆ. ಅವರು ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ವಿವರಿಸಿದರು. ಗದಗ ಡಿಸಿ ವರ್ಗಾವಣೆ, ಗಣಿ ಲಾರಿಗಳ ಮೇಲೆ ಹೆಚ್ಚುವರಿ ಸುಂತ ವಿಧಿಸಿರುವುದು. ಸಚಿವರ ಖಾತೆಗಳ ಮೇಲೆ ಅನಗತ್ಯ ಸವಾರಿಯಿಂದ ರೆಡ್ಡಿ ಮತ್ತು ಸಿಎಂ ನಡುವೆ ಭಿನ್ನಮತ ಉಂಟಾಗಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X