ಜನಾದೇಶಕ್ಕೆ ತಲೆಬಾಗುವೆವು : ಬಿಜೆಪಿ

ಇನ್ನೊಂದಡೆ ಬಿಜೆಪಿ-ಶಿವಸೇನೆ ಪಾಳೆಯದಲ್ಲಿ ನಿರಾಶ ಕಾರ್ಮೋಡ ಕವಿದಿದ್ದು, ನಾಯಕರ ಮುಖ ಕಪ್ಪಿಟ್ಟಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ, ಜನಾದೇಶಕ್ಕೆ ತಲೆಬಾಗುವುದಾಗಿ ಹೇಳಿದ್ದಾರೆ. ಜನತೆಯ ತೀರ್ಮಾನವೇ ಅಂತಿಮ. ಪ್ರತಿಪಕ್ಷದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.
ಶಿವಸೇನೆ ಮುಖಂಡ ಮನೋಹರ ಜೋಶಿ ಕೂಡಾ ಫಲಿತಾಂಶಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಈ ಚುನಾವಣೆಯಲ್ಲಿ ನಮಗೆ ಗೆಲುವು ದೊರೆಯಲಿದೆ ಎಂಬ ನಂಬಿಕೆ ಇತ್ತು. ಆದರೆ, ಮತದಾರರ ನಿರ್ಧಾರವೇ ಬೇರೆ ಆಗಿತ್ತು. ಆಗಿರುವ ತಪ್ಪನ್ನು ತಿದ್ದುಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುವುದಾಗಿ ಅವರು ಹೇಳಿದರು.
(ಏಜನ್ಸೀಸ್)












Click it and Unblock the Notifications