ರಾಜ್ಯದಲ್ಲಿ ತಬರನ ಕಥೆಗೆ ತೆರೆ
ಬೆಂಗಳೂರು, ಅ .14 :ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿರುವ ಇ-ಪ್ರೊಕ್ಯೂರ್ಮೆಂಟ್ ಹಾಗೂ ಎಚ್ಆರ್ಎಂಎಸ್ ಯೋಜನೆಗಳಿಗೆ ಪ್ರತಿಷ್ಠಿತ ಸಿಎಸ್ಐ-ನಿಹಿಲೆಂಟ್ ಇ-ಆಡಳಿತ ಪ್ರಶಸ್ತಿ ಸಂದಾಯವಾಗಿದೆ. 2008-09 ನೇ ಸಾಲಿನ ಈ ಪ್ರಶಸ್ತಿಯನ್ನು ಅಕ್ಟೋಬರ್ 9 ರಂದು ಪೂನಾದಲ್ಲಿ ನಡೆದ ಒಂದು ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ತಬರನ ಕಥೆಯನ್ನು ಇನ್ನಿಲ್ಲವಾಗಿಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ ಎನ್ನುತ್ತದೆ ಕರ್ನಾಟಕ ಸರಕಾರ. ಇಷ್ಟಕ್ಕೂ ರಾಜ್ಯಕ್ಕೆ ಈ ಅವಾರ್ಡ್ ಯಾಕೆ ಬಂತು?ಎಚ್ಆರ್ಎಂಎಸ್ ಎಂದರೇನು ? ಇ-ಪ್ರೊಕ್ಯೂರ್ಮೆಂಟ್ ಯಾತಕ್ಕಾಗಿ ?
ಎಚ್ಆರ್ಎಂಎಸ್: ಈ ಯೋಜನೆಯಡಿಯಲ್ಲಿ ರಾಜ್ಯದ 5 ಲಕ್ಷ ಸರ್ಕಾರಿ ನೌಕರರು/ ಅಧಿಕಾರಿಗಳು ತಮ್ಮ ವೇತನವನ್ನು ಎಚ್ಆರ್ಎಂಎಸ್ ತಂತ್ರಾಂಶವನ್ನು ಬಳಸಿ ಪಡೆಯುತ್ತಿದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರ ಯಶಸ್ವಿಯಾಗಿ ಅನುಷ್ಠಾಗೊಳ್ಳುತ್ತಿರುವ ಯೋಜನೆಯಾಗಿದೆ. ಇದರ ಮುಂದುವರೆದ ಭಾಗವಾಗಿ ದಿನಾಂಕ 31-03-2010ರಿಂದ ನಿವೃತ್ತರಾಗುವ ಸರ್ಕಾರಿ ನೌಕರರಿಗೆ ನಿವೃತ್ತಿಯಾಗುವ ದಿನದಂದೇ ಅವರಿಗೆ ಸಿಗಲಿರುವ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುವುದು. ಇದಕ್ಕಾಗಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರುಗಳ ಸೇವಾ ಪುಸ್ತಕದಲ್ಲಿನ ವಿವರಗಳನ್ನು ( Service Register)ಅಂತರ್ಜಾಲದ ಮುಖಾಂತರ ರಾಜ್ಯದ ಡೆಟಾ ಸೆಂಟರ್ನಲ್ಲಿ ಸಂಗ್ರಹಿಸಲಾಗುತ್ತಿದೆ.
ಪಾರದರ್ಶಕತೆಗಾಗಿ ಇ-ಪ್ರೊಕ್ಯೂರ್ಮೆಂಟ್ ಯೋಜನೆ : ಈ ಯೋಜನೆಯಡಿಯಲ್ಲಿ ರಾಜ್ಯದ ಸಂಗ್ರಹಣಾ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ವಿದ್ಯುನ್ಮಾನ ಮಾಧ್ಯಮವನ್ನು ಬಳಸಿಕೊಂಡು ಯಾವುದೇ ಬಿಡ್ಡುದಾರರು ಯೋಜನೆಯ ಟೆಂಡರ್ ಕಾರ್ಯದಲ್ಲಿ ಭಾಗವಹಿಸಬಹುದು. ಲೋಕೋಪಯೋಗಿ ಇಲಾಖೆ, ಬಿ.ಡಿ.ಎ. ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ರಸ್ತೆ ಅಬಿವೃದ್ಧಿ ನಿಗಮ ಸೇರಿದಂತೆ 38 ಕ್ಕೂ ಅಧಿಕ ಇಲಾಖೆಗಳು ಈ ವೇದಿಕೆಯನ್ನು ಬಳಸಿಕೊಂಡು 9500 ಕೋಟಿ ರೂಪಾಯಿಗಳ ಸಂಗ್ರಹಣಾ ಪ್ರಕ್ರಿಯೆಯನ್ನು ಈ ಒಂದು ವರ್ಷದಲ್ಲಿ ನಡೆಸಿದೆ.
ಇ-ಆಡಳಿತ ಇಲಾಖೆಯು ಈ ಯೋಜನೆಗಳ ಪಾಲುದಾರರಾದ ಎಲ್ಲಾ ಬಡವಾಡೆ ಅಧಿಕಾರಿಗಳನ್ನು/ಗುತ್ತಿಗೆದಾರರನ್ನು/ಅನುಷ್ಠಾನ ಅಧಿಕಾರಿಗಳನ್ನು ಮತ್ತು ಯೋಜನೆಗಳ ಖಾಸಗಿ ಪಾಲುದಾರರಾದ ಹ್ಯೂಲೆಟ್ ಪ್ಯಾಕರ್ಡ್ ಮತ್ತು ಸಿಎಂಸಿ ಕಂಪನಿಯನ್ನು ಹಾರ್ದಿಕವಾಗಿ ಈ ಸಂದರ್ಭದಲ್ಲಿ ಅಭಿನಂದಿಸಿದೆ.
ಸರಕಾರಿ ಸುದ್ದಿ ಮೂಲ, ಇಂಗ್ಲಿಷಿನಲ್ಲಿ :
Prestigious CSI-Nihilent e-Governance Awards to Karnataka
Bangalore, October 14: (Karnataka Information): Karnataka e-Governance Department has bagged the prestigious CSI-Nihilent e-Governance Award for the year 2008-09 for its e- Procurement HRMS programmes.
At a special function held on 9-10-2009 at Pune, the prestigious CSI-Nihilent e-Goverance Awards 2008-09 was given to (1) e-Procurement and (2) HRMS programmes implemented by the e-Governance department of the State Government.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications