ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾತಿ ಆಧಾರಿತ ಪ್ರಾತಿನಿಧ್ಯಕ್ಕೆ ಒಕ್ಕಲಿಗರ ಆಗ್ರಹ
ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌದ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಖಾಸಗಿ ಹೋಟೆಲ್ ವೊಂದರಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಶಾಸಕರು, ಸಂಸದರು, ಮಾಜಿ ಶಾಸಕರು, ಕಳೆದ ವಿಧಾನಸಭೆಯಲ್ಲಿ ಸೋತವರು ಭಾಗವಹಿಸಿದ್ದರು. ಪಕ್ಷ, ಸರಕಾರದಲ್ಲಿ ತಮ್ಮ ಜಾತಿಗೆ ಲಭ್ಯವಾಗುತ್ತಿರುವ ಅವಕಾಶಗಳ ಕುರಿತು ಪರಾಮರ್ಶೆ ನಡೆಸಿದರು.
ನಮ್ಮ ನಾಯಕರು ಯಡಿಯೂರಪ್ಪ. ಅವರ ನಾಯಕತ್ವದ ವಿರುದ್ಧ ಯಾವುದೇ ಅಪಸ್ವರವಿಲ್ಲ. ಆದರೆ, ನಮ್ಮ ಜನಾಂಗಕ್ಕೂ ಸಮಪಾಲು ಸಿಗಬೇಕು ಎನ್ನುವ ನಿರ್ಣಯಕ್ಕೆ ಬರಲಾಗಿದೆ. ಸಭೆಗೆ ರಾಮಚಂದ್ರೇಗೌಡ ಸೇರಿದಂತೆ 60 ಮಂದಿ ಬಿಜೆಪಿಯ ಒಕ್ಕಲಿಗ ಮುಖಂಡರು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, September 16, 2009, 10:42 [IST]