ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೆಚ್ಚಕ್ಕೆ ಕಡಿವಾಣ : ಈಗ ಸೋನಿಯಾ ಸರದಿ
ಮುಂಬೈನಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ದೇಶ ಬರ ಹಾಗೂ ಆರ್ಥಿಕ ಕುಸಿತದಿಂದ ತೀವ್ರ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸರಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿತ್ತು. ಈ ಕುರಿತು ಅಧಿಕೃತವಾಗಿ ಹೇಳಿಕೆ ನೀಡಿದ್ದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಅವರು ಸ್ವತಃ ವಿಮಾನದ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿ ಮಾದರಿಯಾಗಿದ್ದರು.
ಮುಖರ್ಜಿ ಅವರನ್ನು ಅನೇಕ ಸಚಿವರು ಅನುಸರಿಸಿದ್ದು, ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಕೂಡಾ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವುದಾಗಿ ಹೇಳಿದ್ದಾರೆ. ಪಂಚತಾರಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಎಸ್ ಎಂ ಕೃಷ್ಣ ಮತ್ತು ಅವರ ಸಹಾಯಕ ಸಚಿವ ಶಶಿ ತರೂರ್ ಅವರು ಸರಕಾರಿ ಬಂಗಲೆಯಲ್ಲಿ ವಾಸ್ತವ್ಯ ಹೂಡುವಂತೆ ಪ್ರಣಬ್ ಸೂಚನೆ ನೀಡಿದ್ದರು.
(ಏಜನ್ಸೀಸ್)
Comments
ಕಾಂಗ್ರೆಸ್ congress ಪ್ರಣಬ್ ಮುಖರ್ಜಿ ಸೋನಿಯಾ ಗಾಂಧಿ sonia gandhi ಆರ್ಥಿಕ ಕುಸಿತ recession pranab mukherjee drought ಬರ
Story first published: Monday, September 14, 2009, 17:29 [IST]