Get Updates
Get notified of breaking news, exclusive insights, and must-see stories!

ಭಗವದ್ಗೀತಾ ಕ್ವಿಜ್ : ಪೂರ್ಣಪ್ರಜ್ಞ ಶಾಲೆ ಜಯಶಾಲಿ

Bhagavad Gita quiz contest winners
ಬೆಂಗಳೂರು, ಸೆ. 14 : ಭಾನುವಾರ ರಾಗಿಗುಡ್ಡದಲ್ಲಿ ನಡೆದ ವಿನೂತನ ಶೈಲಿಯ ಭಗವದ್ಗೀತಾ ಪ್ರಶ್ನೋತ್ತರ ಮಾಲಿಕೆ (ಕ್ವಿಜ್) ಅಂತಿಮ ಸುತ್ತಿನಲ್ಲಿ ಸದಾಶಿವನಗರದ ಪೂರ್ಣಪ್ರಜ್ಞ ಶಾಲೆ, ಪ್ರಾರ್ಥನಾ ಶಾಲೆ ಮತ್ತು ಯಲಹಂಕದ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

ಆಗಸ್ಟ್ 2ರಂದು ಪ್ರಾರಂಭವಾದ "ಗೀತಾ - ದ್ಯುತಿ 2009" ಭಗವದ್ಗೀತಾ ಪ್ರಶ್ನೋತ್ತರ ಮಾಲಿಕೆಯು 2 ಲಿಖಿತ ಹಾಗೂ 2 ಮೌಖಿಕ ಪರೀಕ್ಷೆಗಳನ್ನು ಒಳಗೊಂಡಿತ್ತು. ಹಾಸನ, ಧಾರವಾಡ, ಮೈಸೂರು, ಬೆಂಗಳೂರು ಸೇರಿದಂತೆ 43 ಶಾಲೆಗಳಿಂದ 1500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಭಾನುವಾರ ಸೆಪ್ಟೆಂಬರ್ 13ರಂದು ಜಯನಗರ 9ನೇ ಹಂತದಲ್ಲಿರುವ ರಾಗೀಗುಡ್ಡದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಶಿರಸಿ ಸ್ವರ್ಣವಲ್ಲಿ ಮಠದ ಪರಮಪೂಜ್ಯ ಶ್ರೀಶ್ರೀ ಗಂಗಾಧರೇಂದ್ರ ಸ್ವಾಮಿಗಳಿಂದ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಸದಾಶಿವನಗರದ ವಿದ್ಯಾರ್ಥಿಗಳು ಮೊದಲ ಬಹುಮಾನ ರೂ. 15000 ಮತ್ತು ಪ್ರಾರ್ಥನಾ ಶಾಲೆಯ ವಿದ್ಯಾರ್ಥಿಗಳು ಎರಡನೇ ಬಹುಮಾನ ರೂ. 10000 ಹಾಗೂ ಪೂರ್ಣಪ್ರಜ್ಞ ಯಲಹಂಕ ಶಾಲೆಯ ವಿದ್ಯಾರ್ಥಿಗಳು ಮೂರನೇ ಬಹುಮಾನ ರೂ. 5000 ಗಳಿಸಿದರು.

ವಿಶಿಷ್ಟ ಗೀತಾಶ್ಲೋಕಗಳ ಶಾಸ್ತ್ರೀಯ ಶೈಲಿಯ ಗಾನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಗವದ್ಗೀತಾ ಶ್ಲೋಕ-ತಾತ್ಪರ್ಯಗಳುಳ್ಳ ವಿಶಿಷ್ಟವಿನ್ಯಾಸದ "ಗೀತಾ ದ್ಯುತಿ" ಎಂಬ ಪುಸ್ತಕವನ್ನು ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷರೂ, ಅನುಭಾವಿ ವಿದ್ವಾಂಸರೂ ಆದ ಎಸ್. ಷಡಕ್ಷರೀರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ಬಾಲ್ಯದಲ್ಲಿ ಗೀತೆಯನ್ನು ಓದುತ್ತಿದ್ದುದನ್ನು ನೆನಪಿಸಿಕೊಂಡು "ಗೀತೆಯನ್ನು ಚಿಕ್ಕ ವಯಸ್ಸಿನಲ್ಲಿ ಓದುವುದರಿಂದ ಜೀವನದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಯಾರೇನೂ ಕೂಡಲೇ ಸನ್ಯಾಸಿಗಳಾಗುವುದಿಲ್ಲ. ಆದ್ದರಿಂದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಇದರಲ್ಲಿ ತೊಡಗಿಸಬೇಕು. ಇದಕ್ಕೆ ಆಧುನಿಕ ಶೈಲಿಯ ಗೀತಾದ್ಯುತಿಯಂತಹ ಪ್ರಶ್ನೊತ್ತರಗಳು ಬೆಂಗಳೂರು ನಗರದ ಆಧುನಿಕ ತಂತ್ರಜ್ಞಾನ ಮುಂತಾದವುಗಳನ್ನು ಅರಿತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಆಕರ್ಷಣೀಯವೂ ಸೂಕ್ತವೂ ಆಗಿದೆ" ಎಂದರು.

ಪ್ರಶ್ನೋತ್ತರಗಳನ್ನು ಕೇಳುತ್ತಾ, ಗೀತೆಯ ತತ್ತ್ವಗಳನ್ನು ವಿದ್ಯಾರ್ಥಿಗಳಿಗೂ, ನೆರೆದ ಜಿಜ್ಞಾಸುಗಳಿಗೂ ಉಪದೇಶಿಸಿದ ಶ್ರೀಶ್ರೀಗಳು "ಗೀತಾದ್ಯುತಿಯಂತಹ ಕಲ್ಪನೆ ಅತ್ಯುತ್ತಮವಾದದ್ದು. ಮಕ್ಕಳಲ್ಲಿ ಗೀತೆಯ ಬಗ್ಗೆ ಆಸಕ್ತಿ ಹೆಚ್ಚಿ ಅವರು ಅದನ್ನು ಓದಿ ಅರ್ಥೈಸಿಕೊಳ್ಳಲು ಇದು ಅತ್ಯಂತ ಸಹಕಾರಿ. ಮಕ್ಕಳು ಸಮಾಜದಲ್ಲಿ ಒಳಿತನ್ನು ಕಂಡುಕೊಂಡು, ಒಳಿತನ್ನೇ ಉಂಟುಮಾಡುವ ಪರೋಪಕಾರ, ನಿಸ್ವಾರ್ಥ ಪ್ರವೃತ್ತಿಗೆ ಗೀತೆಯ ನಿಷ್ಕಾಮ ಕರ್ಮ ತತ್ವವು ಅತ್ಯಂತ ಸೂಕ್ತ ಮಾರ್ಗದರ್ಶಕ" ಎಂದು ಹೇಳಿ ಪ್ರಶ್ನೋತ್ತರಮಾಲಿಕೆಯ ನಂತರ ವಿಜೇತರಿಗೆ ಬಹುಮಾನವಿತರಣೆಯನ್ನು ಮಾಡಿದರು.

ಕಾರ್ಯಕ್ರಮವನ್ನು ಆಯೋಜಿಸಿ ನಿರ್ವಹಿಸಿದ "ಕಲ್ಚರಲ್ ಇಂಡಿಯಾ" ಸಂಸ್ಥೆಯ ದಿಲೀಪ್ ಬೆಳ್ಳಾವೆಯವರು ಮಾತನಾಡಿ ಶ್ರೀಶ್ರೀಗಳ ಆಶೀರ್ವಾದ, ಷಡಕ್ಷರಿ ಮುಂತಾದವರ ಸಹಕಾರಗಳನ್ನು ಸ್ಮರಿಸುತ್ತಾ 45 ದಿನಗಳ ಸುದೀರ್ಘಕಾಲದಲ್ಲಿ 1500 ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರು, ಪೋಷಕರುಗಳು ನಿರಂತರ ಗೀತೆಯ ಅಧ್ಯಯನದಲ್ಲಿ ತೊಡಗುವಂತೆ ಆಗಿದ್ದಕ್ಕೆ ಹರ್ಷವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಗಳನ್ನು ಕೇಳಿದ ಅವರು ಕಾರ್ಯಕ್ರಮವನ್ನು ಪ್ರಾಯೋಜಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುವುದರೊಂದಿಗೆ ಕಾರ್ಯಕ್ರಮದ ಮುಕ್ತಾಯವಾಯಿತು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+