ಜಸ್ವಂತ್ ಪಾಕ್ ಭೇಟಿ ಸದ್ಯಕ್ಕಿಲ್ಲ : ಮಾನವೇಂದ್ರ
ನವದೆಹಲಿ,
ಆ. 28 : ಮೊಹ್ಮದ್ ಅಲಿ ಜಿನ್ನಾ ಕುರಿತ ಪುಸ್ತಕ ವಿವಾದದಿಂದ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಜಸ್ವಂತ್ ಸಿಂಗ್ ಅವರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡುವ ಉದ್ದೇಶವಿಲ್ಲ ಹಾಗೂ ವೀಸಾಕ್ಕೆ ಅರ್ಜಿ ಸಲ್ಲಿಸಿಯೂ ಇಲ್ಲ ಎಂದು ಮಾನವೇಂದ್ರ ಸಿಂಗ್ ತಿಳಿಸಿದ್ದಾರೆ. id="toptextpromo">ಪಾಕಿಸ್ತಾನದ
ಹೆಸರಾಂತ ಪುಸ್ತಕದ ಅಂಗಡಿಯಲ್ಲಿ ತಮ್ಮ ಪುಸ್ತಕದ ಪ್ರತಿಗಳಿಗೆ ಸಹಿ ಹಾಕಲು ಹಾಗೂ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಲಿರುವ ಜಸ್ವಂತ್ ಸಿಂಗ್ ಅವರಿಗೆ ಭಾರತ ಸರಕಾರದ ಭದ್ರತಾ ಅನುಮತಿಯನ್ನು ನಿರಾಕರಿಸಿದೆ ಎಂಬ ಮಾಧ್ಯಮ ವರದಿಯನ್ನು ಪ್ರಸ್ತಾರಿಸಿದ ಮಾನವೇಂದ್ರ, ನಮ್ಮ ತಂದೆ ವೀಸಾಕ್ಕೆ ಅರ್ಜಿ ಸಲ್ಲಿಸಿಲ್ಲ, ಹಾಗಿದ್ದ ಮೇಲೆ ಪಾಕ್ ಗೆ ಭೇಟಿ ನೀಡಲು ಅವರಿಗೆ ಭದ್ರತಾ ಅನುಮತಿಯನ್ನು ಭಾರತ ಸರಕಾರ ನಿರಾಕರಿಸುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಹೇಳಿದ್ದಾರೆ.id='are-slot-1' class='oiad oi-axt oiadv'> id='top-searched-articles'>
(ಏಜನ್ಸೀಸ್)












Click it and Unblock the Notifications