ಹಿರಿಯೂರು ಬಂದ್ ಶಾಂತಿಯುತ

ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು, ಬ್ಯಾಂಕ್, ಅಂಗಡಿ ಮುಂಗಟ್ಟು, ಚಿತ್ರಮಂದಿರ, ಸಹಕಾರಿ ಬ್ಯಾಂಕ್, ಹೋಟೆಲ್, ಅಂಚೆ ಹಾಗೂ ಜೀನ ವಿಮೆ ಕಚೇರಿಗಳು ಮುಚ್ಚಿದ್ದವು. ಬಸ್, ಇತರ ವಾಹನಗಳು ಪಟ್ಟಣದಿಂದ ಹೊರಗುಳಿದಿದ್ದವು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್, ಕೆಎಸ್ ಆರ್ ಪಿ, ಅರೆ ಮಿಲಿಟರಿ ಪಡೆ, ಡಿಎಆರ್ ಸಿಬ್ಬಂದಿಯನ್ನು ಬುಧವಾರ ರಾತ್ರಿಯಿಂದಲೇ ನಿಯೋಜಿಸಲಾಗಿತ್ತು.
ಕಾಂಗ್ರೆಸ್, ಜೆಡಿಎಸ್, ಬಿಎಸ್ ಪಿ ಪಕ್ಷಗಳ ಮುಖಂಡರು ಜಾಗೃತಿ ವೇದಿಕೆ ಎಂಬ ಹೆಸರಿನಡಿ ನೆಹರೂ ವೃತ್ತದಲ್ಲಿ ಸಭೆ ನಡೆಸಿ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದರು. ಆರೋಪಿ ಸ್ಥಾನದಲ್ಲಿರುವ ಸಚಿವ ಸುಧಾಕರ್ ಹಾಗೂ ಮತದಾರರಿಂದ ತಿರಸ್ಕೃತರಾದ ಸೋಮಣ್ಣ ಅವರನ್ನು ಕೈಬಿಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications