ಆಡ್ವಾಣಿ ಆಪ್ತ ಸುಧೀಂದ್ರ ಟಿಎಂಸಿ ತೆಕ್ಕೆಗೆ ?
ನವದೆಹಲಿ, ಆ. 27 : ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ತೊರೆದಿದ್ದ ಆಡ್ವಾಣಿ ಅವರ ಆಪ್ತ ಎನ್ನಲಾದ ಕರ್ನಾಟಕದ ಮೂಲದ ಸುಧೀಂದ್ರ ಕುಲಕರ್ಣಿ ಸದ್ದಿಲ್ಲದೆ ರೈಲ್ವೆ ಸಚಿವಾಲಯದ ಮುಖ್ಯ ಸಮಿತಿ ಸೇರಿಕೊಂಡಿದ್ದಾರೆ. ಸ್ವತಃ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ತಿಂಗಳ ಹಿಂದೆಯೇ ಈ ನೇಮಕ ಮಾಡಿದ್ದಾರೆ.
ಎಫ್ ಐಸಿಸಿಐ ಪ್ರಧಾನ ಕಾರ್ಯದರ್ಶಿ ಅಮಿತ್ ಮಿಶ್ರಾ ನೇತೃತ್ವದ ಸಮಿತಿಗೆ ನೇಮಕಗೊಂಡಿದ್ದೇನೆ. ಇದು ವಾಜಪೇಯಿ ಪ್ರಧಾನಿಯಾಗಿದ್ದಾಗ ರೇಲ್ವೆ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರೊಂದಿಗಿನ ಸೌಹಾರ್ದದ ಫಲವೇ ಹೊರತು ತೃಣಮೂಲ ಕಾಂಗ್ರೆಸ್ ತಾವು ಸೇರುತ್ತಿಲ್ಲ ಎಂದು ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.
ರೈಲ್ವೆಯ ಅಧುನೀಕರಣ ಹಾಗೂ ವಿಸ್ತರಣೆಗಾಗಿ ಹೊಸ ಯೋಜನೆಗಳ ಜಾರಿ ಮತ್ತು ಹಣಕಾಸು ನೆರವು ಸಂಗ್ರಹ ಕುರಿತು ರೈಲ್ವೆ ಸಚಿವಾಲಯಕ್ಕೆ ಶಿಫಾರಸ್ಸುಗಳನ್ನು ಮಾಡುವ ಜವಾಬ್ದಾರಿ ಸುಧೀಂದ್ರ ಅವರನ್ನೊಳಗೊಂಡ ಸಮಿತಿಗೆ ಇದೆ. ಅಲ್ಲದೇ ಖಾಸಗಿ ಹೂಡಿಕೆ ಆಕರ್ಷಿಸುವ ಕುರಿತು ಸಲಹೆಗಳನ್ನು ನೀಡುವ ಹೊಣೆಯೂ ಇದೆ. ಈ ನಡುವೆ ಸುಧೀಂದ್ರ ಅವರು ತೃಣಮೂಲ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅಂಶವೂ ಬಲವಾಗಿ ಕೇಳಿ ಬರತೊಡಗಿದೆ.
(ಏಜನ್ಸೀಸ್)