ಜಸ್ವಂತ್ ಗೆ ಸಮಾಜವಾದಿ ಅಮರ್ ಆಹ್ವಾನ
ನವದೆಹಲಿ
ಆ 25: ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಂಡಿರುವ ಹಿರಿಯ ತಲೆ ಜಸ್ವಂತ್ ಸಿಂಗ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಸಮಾಜವಾದಿ ಪಕ್ಷ ಆಹ್ವಾನ ನೀಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಾ, ಜಸ್ವಂತ್ ಸಿಂಗ್ ಅವರಿಗೆ ಈಗಾಗಲೆ ಪಕ್ಷದಿಂದ ಆಹ್ವಾನ ನೀಡಲಾಗಿದೆ ಆದರೆ ಅವರು ತಮ್ಮ ಮುಂದಿನ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ ಎಂದು ತಿಳಿಸಿದ್ದಾರೆ. id="toptextpromo">ಮೊಹಮ್ಮದ್
ಆಲಿ ಜಿನ್ನಾ ಅವರ ಬಗ್ಗೆ ಜಸ್ವಂತ್ ಸಿಂಗ್ ತಳೆದ ನಿಲುವು ಮತ್ತು ಸಮಾಜವಾದಿ ಪಕ್ಷ ನಿಲುವು ಹೊಂದಾಣಿಕೆಯಾಗುತ್ತದೆ. 30 ವರ್ಷದಿಂದ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕನನ್ನು ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಘೋರ ತಪ್ಪು ಮಾಡಿದೆ. ಬಿಜೆಪಿ ಈಗ ಒಡೆದ ಮನೆಯಂತಾಗಿದ್ದು ಆಡ್ವಾಣಿ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಮರ್ ಸಿಂಗ್ ಲೇವಡಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications