ನಾಗವಾರದ ಬಳಿ 3 ವರ್ಷದ ಬಾಲಕನ ಬರ್ಬರ ಹತ್ಯೆ
ಬೆಂಗಳೂರು, ಆ. 24 : ಎರಡು ದಿನಗಳ ಹಿಂದೆ ಅಪಹರಿಸಲಾಗಿದ್ದ 3 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಹತ್ಯೆಗೈದು ಹೆಬ್ಬಾಳ ಬಳಿಯಿರುವ ನಾಗವಾರ ಕೆರೆಯ ಹತ್ತಿರ ಬಿಸಾಕಿರುವ ಅಮಾನವೀಯ ಘಟನೆ ನಿನ್ನೆ ರಾತ್ರಿ ಜರುಗಿದೆ.
ಬಳ್ಳಾರಿ ರಸ್ತೆಯಲ್ಲಿ ಅಮೃತನಗರದಿಂದ ರಾಹುಲ್ ಎಂಬ ಬಾಲಕನನ್ನು ಎರಡು ದಿನಗಳ ಹಿಂದೆಯೇ ಅಪಹರಿಸಲಾಗಿತ್ತು. 1 ಲಕ್ಷ ರು. ನೀಡಬೇಕೆಂದು ಅಪಹರಣಕಾರರು ಬೇಡಿಕೆಯನ್ನಿಟ್ಟಿದ್ದರು. ರಾಹುಲ್ ನ ಪಾಲಕರು ಪೊಲೀಸರಿಗೆ ದೂರು ನೀಡಿದ್ದರಿಂದ ವಿಚಲಿತರಾದ ಅಪಹರಣಕಾರರು ಬಾಲಕನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.
ರಾಹುಲ್ ಅಪಹರಣವಾದಾಗ ಬಂದ ಕರೆಯ ಜಾಡನ್ನು ಹುಡುಕುತ್ತ ಪೊಲೀಸರು ಹೋದಾಗ ಸಿಕ್ಕಿದ್ದು ನಯಾಂ ಎಂಬಾತ. ಆತನನ್ನು ಬಂಧಿಸಿರುವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ವಿಚಾರಣೆಯನ್ನು ಮುಂದುವರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications