ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎನ್ ಪಿಸಿಐ ನಾನ್ ಎಕ್ಸಿಕ್ಯುಟವ್ ಆಗಿ ಇನ್ಫಿ ಮೂರ್ತಿ?
ಆರ್ ಬಿಐ ತನ್ನ ರಿಟೇಲ್ ವಿಭಾಗದ ಕಾರ್ಯಾಚರಣೆ ಉಸ್ತುವಾರಿಗೆ ಎನ್ ಪಿಸಿಐ ವಿಭಾಗ ಸ್ಥಾಪಿಸಲು ಮುಂದಾಗಿದ್ದು, ಆದರ ನಾನ್ ಎಕ್ಸಿಕ್ಯೂಟಿವ್ ಚೇರಮನ್ ಆಗಿ ನಾರಾಯಣಮೂರ್ತಿ ನಿಯುಕ್ತಿರಾಗುವ ಸಾಧ್ಯತೆಗಳಿವೆ. ಹೊಸ ಸಂಸ್ಥೆಯ ಸ್ಥಾಪನೆ ಸಂಬಂಧ ಭಾರತೀಯ ಬ್ಯಾಂಕುಗಳ ಸಂಘ(ಐಬಿಎ) ಆಯೋಜಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಉನ್ನತ ಹುದ್ದೆಯನ್ನು ಅಲಂಕರಿಸುವ ಸಲುವಾಗಿ ಐಬಿಎ ಅಧಿಕಾರಿಗಳು ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.
ರಿಸರ್ವ್ ಬ್ಯಾಂಕ್ 2005-08ರ ಮುನ್ನೋಟದಲ್ಲಿ ಎನ್ ಪಿಸಿಐ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿತ್ತು. ಬ್ಯಾಂಕಿನ ಹೊಸ ವ್ಯವಹಾರದಲ್ಲಿ ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ ಚಟುವಟಿಕೆ ಒಳಗೊಂಡಿರುವುದಿಲ್ಲ ಎಂದು ಆರ್ ಬಿಐ ನೇರವಾಗಿ ತಿಳಿಸಿವೆ.
(ಏಜನ್ಸೀಸ್)
Comments
Story first published: Thursday, August 20, 2009, 13:06 [IST]