ಮುಖ್ಯಮಂತ್ರಿಯನ್ನು ಬಂಧಿಸಿ, ಉಗ್ರಪ್ಪ
ಬೆಂಗಳೂರು,
ಆ. 19 : ಕೇಂದ್ರ ಚುನಾವಣಾ ಆಯೋಗದಿಂದ ಛೀಮಾರಿಗೆ ಒಳಗಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಅವರನ್ನು ಬಂಧಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ. id="toptextpromo">ಈ
ನೆಲದಲ್ಲಿ ಜನಸಾಮನ್ಯರಿಗೊಂದು ಮುಖ್ಯಮಂತ್ರಿಗಳಿಗೊಂದು ಕಾನೂನು ಇಲ್ಲ. ಯಡಿಯೂರಪ್ಪ ವಿರುದ್ದ ಪೋಲಿಸ್ ಕೇಸ್ ದಾಖಲಿಸಬೇಕು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಮತದಾರರಿಗೆ ಭರವಸೆ ನಿಡುವ ಮೂಲಕ ನಿಯಮ ಉಲ್ಲಂಘಿಸಿ ಅಪರಾಧವೆಸಗಿದ್ದಾರೆ. ಒಂದು ವೇಳೆ ಅವರಿಗೆ ದಂಡ ವಿಧಿಸಿದರೆ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ. ಆಕಸ್ಮಾತಾಗಿ ಜನಸಾಮಾನ್ಯರು ಈ ತಪ್ಪನ್ನು ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದರೆ ಎಂದು ಉಗ್ರಪ್ಪ ಕಿಡಿಕಾರಿದ್ದಾರೆ. ಕೊಳ್ಳೇಗಾಲ ಚುನಾವಣೆ ಪ್ರಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications