ಮೈಸೂರಿನ ಪತ್ರಕರ್ತರಿಂದ ಸಂಕ್ರಾಂತಿ ನಾಟಕ

Sankranti drama by Mysuru journalists
ಮೈಸೂರು, ಆ.18 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಸುದ್ದಿಯ ನಡುವೆ ಸದ್ದಿಲ್ಲದೇ ಸೊರಗಿ ಹೋಗುವ ಪತ್ರಕರ್ತರು ನಾಟಕ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ. ಅದೂ ಲಂಕೇಶ್ ಅವರ ಸಂಕ್ರಾಂತಿ ನಾಟಕವನ್ನು ರಂಗದ ಮೇಲೆ ತರಲಿದ್ದಾರೆ. ಇದರ ಹೊಣೆಯನ್ನು ನಾಡಿನ ಹೆಸರಾಂತ ನಟ, ರಂಗ ಕಲಾವಿದ ಮಂಡ್ಯ ರಮೇಶ್ ಅವರು ಹೊತ್ತಿದ್ದಾರೆ. ಇದಲ್ಲದೆ ಅಂದು ಸಂಜೆ 6ಕ್ಕೆ ಜನ್ನಿ ತಂಡದವರಿಂದ ಜನಪದ ಗೀತ ಗಾಯನವಿರುತ್ತದೆ. ಪಿಚ್ಚಳ್ಳಿ ಶ್ರೀನಿವಾಸ್ ಹಾಗೂ ಗೊಲ್ಲಹಳ್ಳಿ ಶಿವಪ್ರಸಾದ್ ಗಾನಸುಧೆ ಹರಿಸಲಿದ್ದಾರೆ.

ಆಗಸ್ಟ್ 19ರ ಬುಧವಾರ ಸಂಜೆ 7
ಸ್ಥಳ- ಮೈಸೂರಿನ ಕಲಾಮಂದಿರ.
ಸಮಯ: ಸಂಜೆ 7

ನಾಟಕ : ಸಂಕ್ರಾಂತಿ
ರಚನೆ : ಪಿ.ಲಂಕೇಶ್
ನಿರ್ದೇಶನ : ಮಂಡ್ಯ ರಮೇಶ್
ಸಂಗೀತ : ಜನ್ನಿ
ಬೆಳಕು : ಆನಂದರಾಜ್
ವಿನ್ಯಾಸ : ಬಾದಲ್

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕುಂದೂರು ಉಮೇಶಭಟ್ಟ,[+919341111816]
ಸಂಘದಖಜಾಂಚಿ ಹಾಗೂ ಪದಾಧಿಕಾರಿಗಳು, ಮೈಸೂರು.

ಮೈಜಿಪ್ಸಂ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ
ತ್ಯಾಗರಾಜ ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು-570004

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+