ದೇವೇಗೌಡರ ಭಯೋತ್ಪಾದಕರ ತಂಡ ನಾಶ

Sadananda gowda
ಬೆಂಗಳೂರು, ಆ. 17 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಟ್ಟಿಕೊಂಡಿರುವ ಭಯೋತ್ಪಾದಕರ ತಂಡವನ್ನು ಬಿಜೆಪಿ ಶೀಘ್ರದಲ್ಲೇ ನಿರ್ನಾಮ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ದೇವೇಗೌಡರನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ರಾಜಕೀಯ ಜೀವನದಲ್ಲಿ ಇಂತಹ ನೊರೆಂಟು ಸದಾನಂದಗೌಡರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಉತ್ತರಿಸಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಬಿಜೆಪಿ ಪರ ಪ್ರಚಾರ ಕಾರ್ಯ ಮುಗಿಸಿ ತೆರಳುತ್ತಿದ್ದ ಸಮಯದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್. ನಾಯ್ಡು ಮತ್ತು ಶಾಸಕ ಮುನಿರಾಜು ಅವರ ಮೇಲೆ ಭಾನುವಾರ ಸಂಜೆ ನಡೆಸಿರುವ ದಾಳಿಯನ್ನು ಸದಾನಂದಗೌಡ ತೀವ್ರವಾಗಿ ಖಂಡಿಸಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲಿನ ಭೀತಿ ಎದುರಿಸುತ್ತಿದೆ. ಆ ಪಕ್ಷದ ನಾಯಕರಿಗೆ ಅಸ್ತಿತ್ವದ ಪ್ರಶ್ನೆಯಾಗಿ ಕಾಡತೊಡಗಿದೆ. ದೇವೇಗೌಡ ಭಯೋತ್ಪಾದಕರ ತಂಡದ ಹುಟ್ಟಡಗಿಸುವುದೇ ಬಿಜೆಪಿ ಏಕೈಕ ಗುರಿ. ಅದರಲ್ಲಿ ನಾವು ಸಫಲರಾಗುತ್ತೇವೆ. ಈ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸುವ ಮೂಲರ ಈ ಪಕ್ಷದ ಹಣೆಬರಹವನ್ನು ಬರೆಯುತ್ತೇವೆ ಎಂದು ಗೌಡ ಕಿಡಿಕಾರಿದರು.

ಸದಾನಂದಗೌರ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ದೇವೇಗೌಡರನ್ನು ಮನೆಗೆ ಕಳುಹಿಸುತ್ತೇವೆ. ಹಾಗೇ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದವರೆಲ್ಲ ಮೂಲೇ ಸೇರಿಕೊಂಡಿದ್ದಾರೆ. ಅವರ ರಾಜಕೀಯ 50 ವರ್ಷಗಳಲ್ಲಿ ಇಂತಹ ಅನೇಕ ಸದಾನಂದಗೌಡರನ್ನು ನೋಡಿದ್ದಾರೆ. ದೇವೇಗೌಡರನ್ನು ಅಲುಗಾಡಿಸುವುದು ಸದಾನಂದಗೌಡ ಅವರ ಪಕ್ಷ ಬಿಜೆಪಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಭಾನುವಾರ ಸಚಿವ ಕಟ್ಟಾ ಸುಬ್ರಮಣ್ಯ ಮತ್ತು ಶಾಸಕ ಮುನಿರಾಜು ಅವರಿಗೆ ಘೇರಾವೂ ಹಾಕಿದ ಜೆಡಿಎಸ್ ಕಾರ್ಯಕರ್ತರು, ಸಚಿವ ಕಟ್ಟಾ ಅವರಿಗೆ ಕಪಾಲಮೊಕ್ಷ ಮಾಡಿದ ಪ್ರಸಂಗವೂ ನಡೆದಿದೆ ಎನ್ನಲಾಗಿದೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+