ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರವೀಗ ಸಾಂಕ್ರಾಮಿಕ ರೋಗಗಳ ಆಗರ

By Staff
|
Google Oneindia Kannada News

Swine flu
ಬೆಂಗಳೂರು, ಆ. 16 :ಎಚ್ 1 ಎನ್ 1 ಮಾಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ನಗರದ ಬೊಮ್ಮಸಂದ್ರದ ಮಂಜುನಾಥ , ನಾಗರಬಾವಿ ನಿವಾಸಿ ಶಿವಣ್ಣ (56) ಅವರ ಸಾವಿನ ಬೆನ್ನಲ್ಲೇ ಇಂದು ತನ್ನ ಐದನೇ ಬಲಿಯನ್ನು ಸೆಂಟ್ ಜಾನ್ ಆಸ್ಪತ್ರೆಯಲ್ಲಿ ತೆಗೆದುಕೊಂಡಿದೆ.

ಅ. 12 ರಂದು ನಗರದ ಕೋರಮಂಗಲದ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾಗಿದ್ದ 27 ವರ್ಷದ ಶಿಲ್ಪಾ ಹೆಗಡೆ ಅವರು ಇಂದು ಸಾವನ್ನಪ್ಪಿದ್ದಾರೆ. ಮೃತರು ಎಚ್1 ಎನ್1 ಸೋಂಕಿನಿಂದ ಸತ್ತಿರುವುದನ್ನು ಸೆಂಟ್ ಜಾನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ದೃಢ ಪಡಿಸಿದ್ದಾರೆ. ನಗರದಲ್ಲಿ ಸೋಂಕು ರೋಗಗಳು ಹಬ್ಬುತ್ತಿದ್ದು, ಅಧಿಕಾರಿಗಳು ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ದಿನ ರಾತ್ರಿ ಡೇಂಘಿ ಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ಬೆನ್ಸ ನ್ ಟೌನ್ ನ ನಿವಾಸಿ ಸಗಾಯಮ್ಮ( 46) ಸಾವಿಗೆ ಶರಣಾಗಿದ್ದಾರೆ. ಇನ್ನೊಂದೆಡೆ ಚಿಕೂನ್ ಗುನ್ಯಾ ಹಾವಳಿ ಇದ್ದೇ ಇದೆ. ಎಚ್1 ಎನ್ 1 ಸೋಂಕಿತರನ್ನು ಪರೀಕ್ಷಿಸುವ ಕ್ರಮ, ತಪಾಸಣಾ ಕಿಟ್ ಬಳಕೆ ಬಗ್ಗೆ ವೈದ್ಯರಲ್ಲೇ ಗೊಂದಲ, ಅಸಮರ್ಥತೆ ಕಾಣುತ್ತಿದೆ. ಇದರ ಜೊತೆಗೆ ಟಾಮಿಫ್ಲೂ ಮಾತ್ರಗಳ ಪೂರೈಕೆ ಕೊರತೆ ಎದ್ದು ಕಾಣುತ್ತಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X