ಉ.ಕರ್ನಾಟಕದಲ್ಲಿ 39 ಮಂದಿಗೆ ಸೋಂಕು
ಹುಬ್ಬಳ್ಳಿ, ಆ. 15 : ಎಚ್1ಎನ್1 ಭೀತ ರಾಜ್ಯಾದ್ಯಂತ ವ್ಯಾಪಕವಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಇದುವರೆಗೆ 39 ಶಂಕಿತ ಪ್ರಕರಣಗಳು ವರದಿಯಾಗಿವೆ. ಈಗಾಗಲೇ ಬೆಂಗಳೂರಿನಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿ ಆಯುರ್ವೇದ ಕಾಲೇಜಿನ ವೈದ್ಯಾರದ ಡಾ ಕೇಶವ (31) ಹಾಗೂ ರಾಹುಲ್ ಸೂರ್ಯ (32) ಗುರುವಾರ ರಾತ್ರಿ ಕಿಮ್ಸ್ ಗೆ ದಾಖಲಾಗಿದ್ದಾರೆ. ಇನ್ನಿಬ್ಬರು ಹಂದಿಜ್ವರ ಶಂಕಿತರಾದ ಉಣಕಲ್ ಮ ದಯಾನಂದ (25) ಹಾಗೂ ವೆಂಕಟೇಶ (23) ಶುಕ್ರವಾರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಜಾಪುರ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 29 ವರ್ಷ ವಯಸ್ಸಿನ ತಾಳಿಕೋಟೆಯ ವ್ಯಕ್ತಿ ಐದು ದಿನ ಬೆಂಗಳೂರಿನಲ್ಲಿದ್ದರು. ಶುಕ್ರವಾರ ಬೆಳಗ್ಗೆ ವಿಜಾಪುರಕ್ಕೆ ಆಗಮಿಸಿದ್ದು, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೂರು ಶಂಕಿತ ಪ್ರಕರಣಗಳು ವರದಿಯಾಗದಿವೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಹಳಿಯಾಳದಲ್ಲಿ ತಲಾ ಒಂದು ಹಾಗೂ ಹೊನ್ನಾವರದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಳಗಾವಿಯಲ್ಲಿ ಒಂಬತ್ತು ಶಂಕಿತ ಪ್ರಕಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು 28 ಶಂಕಿತ ವರದಿಯಾಗಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications