ಎಚ್1 ಎನ್1 : ಹುಬ್ಬಳ್ಳಿಯಲ್ಲಿ ಇಬ್ಬರಿಗೆ ಸೋಂಕು ?
ಹುಬ್ಬಳ್ಳಿ, ಆ. 14 : ಬೆಂಗಳೂರಿನ ರೂಪ ಆನಂದ ಹಂದಿಜ್ವರಕ್ಕೆ ಮೊದಲ ಬಲಿಯಾದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಇಬ್ಬರಿಗೆ ಮತ್ತು ಉಡುಪಿಯಲ್ಲಿ ಮತ್ತಿಬ್ಬರಿಗೆ ಎಚ್1ಎನ್ 1 ಸೋಂಕು ಪತ್ತೆಯಾಗಿರುವುದು ವರದಿಯಾಗಿದೆ.
ಹುಬ್ಬಳ್ಳಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಗಳು ಇಬ್ಬರೂ ಆಯುರ್ವೇದಿಕ ವೈದ್ಯರಾಗಿದ್ದಾರೆ. ಕೆಲಸ ನಿಮಿತ್ತ ಅವರ ಕಳೆದ ವಾರ ಅವರು ದೆಹಲಿಗೆ ತೆರಳಿದ್ದರು. ಅತ್ತಲಿಂದ ಬರುವಾಗ ಪುಣೆಯಲ್ಲಿ ನಾಲ್ಕು ಗಂಟೆಗಳ ಕಾಲ ತಂಗಲಾಗಿತ್ತು ಸ್ವತ ವೈದ್ಯರೇ ತಿಳಿಸಿದ್ದಾರೆ. ಇದೇ ಕಾರಣದಿಂದ ಸೋಂಕು ಬಂದಿರುಬಹುದು ಎಂದು ಅವಲರ ಶಂಕೆ ವ್ಯಕ್ತಪಡಿಸುತ್ತಾರೆ. ಸದ್ಯ ಅವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ ಎಚ್1 ಎನ್ 1 ವಾರ್ಡ್ ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಕಿಮ್ಸ್ ವೈದ್ಯರು ತಿಳಿಸಿದ್ದಾರೆ.
ಇನ್ನು ಉಡುಪಿಯಲ್ಲಿ ಮಾರಿಗೆ ಕಾಟ ವೃದ್ಧಿಯಾಗುತ್ತಿದ್ದು, ಇಂದು ಮತ್ತಿಬ್ಬರಿಗೆ ಸೋಂಕಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಅವರನ್ನು ಕೆಎಂಸಿ ಆಸ್ಪತ್ರೆ ದಾಖಲಿಸಲಾಗಿದೆ. ಅವರ ರಕ್ತದ ಮಾದರಿಯನ್ನೂ ಕೂಡಾ ಬೆಂಗಳೂರಿಗೆ ಕಳುಹಿಸಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಎಚ್1ಎನ್1 ಶಂಕಿತರ ಸಂಖ್ಯೆ 7 ಕ್ಕೆ ಏರಿದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)