ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ

ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ಆಗಸ್ಟ್ 14 ರ ಸಂಚಿಕೆಯಲ್ಲಿ ಚಲನಚಿತ್ರ ನಟಿ ರಮ್ಯಾ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಮೇಲಿನ ಮಾತುಗಳನ್ನು ಆಡಿದ್ದಾರೆ. ಅವರು ಆಡಿರುವ, ಕನ್ನಡ ಓದುಗರೊಂದಿಗೆ ಹಂಚಿಕೊಂಡಿರುವ, ಇನ್ನು ಕೆಲವು ಮಾತುಗಳ, ಸಾರ, ಸಂಗ್ರಹವನ್ನು ಸಂಕ್ಷಿಪ್ತಗೊಳಿಸಿ ಇಲ್ಲಿ ಸಾದರಪಡಿಸಲಾಗಿದೆ.
*ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಬೂಕನಕೆರೆ ನನ್ನ ಜನ್ಮ ಭೂಮಿ.
*ಮಂಡ್ಯ ನನ್ನ ಕರ್ಮಭೂಮಿ ಮತ್ತು ಧರ್ಮ ಭೂಮಿಯಾಗಿದೆ.
*ವೀರೇಂದ್ರ ಪಾಟೀಲ್ ಮತ್ತು ದೇವರಾಜ್ ಅವರು ನನ್ನ ನೆಚ್ಚಿನ ರಾಜಕಾರಣಿಗಳು
*ಅಂಥವರು ಈಗ ಕಡಿಮೆ.ಇದ್ದಾರೆ ಆದರೆ ಹೆಸರು ಹೇಳುವುದಿಲ್ಲ. ಸ್ಟ್ಯಾಂಡರ್ಡ್ ಕಡಿಮೆ ಆಗಿದೆ
*ದೇವೇಗೌಡರ ಹಾರ್ಡ್ ವರ್ಕ್ ಮತ್ತು ಪರಿಶ್ರಮದ ಬಗ್ಗೆ ನನಗೆ ಬಹಳ ಗೌರವವಿದೆ.
*ಆತಂಕವಾದಾಗ ದೇಗುಲಕ್ಕೆ ಹೋಗುತ್ತೇನೆ.
*ವೀರಭದ್ರ ಶಾಸ್ತ್ರಿಗಳ ಹಿರಿಯ ಮಗಳು ಮೈತ್ರಾದೇವಿಯನ್ನು ವಿವಾಹವಾದೆ.
*ಶಾಸ್ತ್ರಿಯವರದ್ದು ಗೌರವಸ್ಥ ಮತ್ತು ಸಂಸ್ಕಾರವ೦ತ ಮನೆತನ.
*ಮೈತ್ರಾದೇವಿ ಈಗ ಇದ್ದಿದ್ದರೆ ಚೆನ್ನಾಗಿತ್ತು. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಅವಳು ಇದ್ದಳು.
*ಅವಳು ಮೃತಳಾದಾಗ ನನಗೆ ಬಹಳ ಆಘಾತವಾಗಿತ್ತು.
*ನನಗೆ ದಾರಿದೀಪವಾಗಿದ್ದ ಆಕೆಯ ನೆನಪು ಪ್ರತಿ ನಿಮಿಷವೂ ಕಾಡುತ್ತಿದೆ.
*ಅವಳ ಫೋಟೋವನ್ನು ದೇವರ ಮನೆಯಲ್ಲೇ ಇಟ್ಟುಕೊಂಡಿದ್ದೇನೆ.
*ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ಎಂದೂ ಬಯಸಿದವನಲ್ಲ.
*ರಾಘವೇಂದ್ರ ಮೂರು ವರ್ಷಗಳ ಹಿಂದೆ ಪುರಸಭೆ ಸದಸ್ಯನಾಗಿದ್ದ.
*ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಮತ್ತು ರಾಜಕೀಯ ವಾತಾವರಣವೇ ಅವನನ್ನು ಸ್ಪರ್ಧಿಸುವಂತೆ ಮಾಡಿತು.
*ಭಗವಂತನ ಇಚ್ಚೆಯಂತೆ ಬಂಗಾರಪ್ಪನವರನ್ನು ಸೋಲಿಸಿದ.
*ಈ ಬಗ್ಗೆ ಸಂತೋಷವೇ ಆಗಿದೆ.
*ನನ್ನ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ನಾನು ಬಯಸುತ್ತಿಲ್ಲ.
*ನಾನು ಹೆದರುವುದು ದೇವರಿಗೆ ಮತ್ತು ಆರ್ ಎಸ್ ಎಸ್ ಸಂಘಟನೆಗೆ
*ಸಂಘದ ಹಿರಿಯರಿಗೆ ನನ್ನ ಕಿವಿಹಿಂಡಿ ಬುದ್ದಿ ಹೇಳುವಸ್ಟು ಅಧಿಕಾರವಿದೆ.
*ತಂದೆ ತಾಯಿಗಿಂತ ಹೆಚ್ಚಾಗಿ ಸಂಘವು ಶಿಸ್ತು ಮತ್ತು ದೇಶಭಕ್ತಿಯನ್ನು ಕಲಿಸಿಕೊಟ್ಟಿದೆ.
*ಕಷ್ಟ ಎದುರಾದಾಗ ಸಂಘದ ಪ್ರಮುಖ ಜಯದೇವ್ ಅವರಲ್ಲಿ ಹಂಚಿಕೊಳ್ಳುತ್ತೇನೆ.
*ಅವರು ನೀಡುವ ಸಲಹೆ, ಮಾರ್ಗದರ್ಶನ, ಸೂಚನೆಯನ್ನು ಪಾಲಿಸಿಕೊಂಡು ಬರುತ್ತೇನೆ.
*ವಾಜಪೇಯಿಯವರ ಪ್ರಭಾವ ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡುವಂತೆ ಮಾಡಿತ್ತು.
ಅಂತಿಮವಾಗಿ ರಾಜಕಾರಣ ಎಂದರೆ ಎನು ಎಂಬ ಪ್ರಶ್ನೆಗೆ "ಜನಸೇವೆ" ಎಂಬ ಉತ್ತರವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಬೈದವೆ, ಸುವರ್ಣ ಟಿವಿಯಲ್ಲಿ ಈ ಸಂದರ್ಶನ ನಾಳೆ ಶನಿವಾರ ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆಗೆ ಪ್ರಸಾರವಾಗಲಿದೆ.











Click it and Unblock the Notifications