ಶೋಭಾ ಕರಂದ್ಲಾಜೆಗೆ ವಿಪರೀತ ಬೆನ್ನುನೋವು

ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯ ಮರೀಚಿಕೆ ಆಗಿರುವುದು ಆ ಜಿಲ್ಲೆಗಳಿಗೆ ಯಾವತ್ತೂ ಕಾಲಿಡದವರಿಗೂ ಗೊತ್ತು. ಈ ಪ್ರಾಂತ್ಯಗಳಲ್ಲಿ ಹಂದಿ ಮರಿ ಹಾಕುವ ರೀತಿಯಲ್ಲಿ ಎಂಟು ಹತ್ತು ಸಲ ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಿ ಅಧಿಕಾರ ಹಿಡಿದರೂ ಸ್ವಂತ ತಾಲೂಕುಗಳನ್ನು ಉದ್ಧಾರ ಮಾಡದ ಆಪಾದನೆ ಹೊತ್ತುಕೊಂಡು ಕರಟಕ ಮತ್ತು ದಮನಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ರಾಜಿನಾಮೆ ಕೊಡಬೇಕು ಎಂದು ದಟ್ಸ್ ಕನ್ನಡ ಆಗ್ರಹಿಸುತ್ತದೆ.
ಯಾಕೆಂದರೆ, ರಾಜ್ಯ ಸಂಪುಟದಲ್ಲಿರುವ ಏಕಮೇವ ಮಹಿಳಾ ಮಂತ್ರಿ ಶೋಭಾ ಕರಂದ್ಲಾಜೆ ಶ್ರಾವಣ ಮಂಗಳವಾರ ಚಿತ್ತಾಪುರ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಹೋಗಿ ಪಡಬಾರದ ಪಾಡು ಅನುಭವಿಸಿದ್ದಾರೆ. ಅವರು ಅನುಭವಿಸಿದ ಯಾತನೆ ಚಿತ್ತಾಪುರ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಅಲೆದವರಿಗೆ ಮಾತ್ರ ಗೊತ್ತಾಗುತ್ತದೆ. ಈ ಊರಿನ ಕಚಡ ರಸ್ತೆಗಳಲ್ಲಿ ಸುತ್ತಾಡಿ ನನಗೆ ಅಪಾರ ಬೆನ್ನು ನೋವು ಬಂದಿದೆ ಎಂದು ಶೋಭಾ ಅತೀವ ಬೇಜಾರುಪಟ್ಟುಕೊಂಡು ಮಾತನಾಡಿದ್ದಾರೆ.
ಕಳೆದ ಸುಮಾರು ಒಂದೇ ಒಂದು ವರ್ಷದಿಂದ ನಮ್ಮ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಈವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಪಕ್ಷಗಳು ಏನನ್ನು ಸಾಧಿಸಿವೆ? ಎಂದು ಅವರು ಚಿತ್ತಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಗುಡುಗಿದ್ದಾರೆ. ಇಲ್ಲಿಯ ರಸ್ತೆಗಳನ್ನು ನೋಡಿದರೆ ನಿಮಗೆ ತಿಳಿಯುವುದಿಲ್ಲವೇ, ಇಲ್ಲಿನ ರಸ್ತೆಗಳಲ್ಲಿ ಚುನಾವಣ ಪ್ರಚಾರ ಸಭೆಗೆ ಓಡಾಡಿ ನನ್ನ ಬೆನ್ನು ಬಿದ್ದು ಹೋಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ಅಂದಿನ ನಾಯಕರನ್ನು ಇಂದಿನ ವಿರೋಧ ಪಕ್ಷವನ್ನು ಏಕಕಾಲಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮದು ರೈತರ ಮತ್ತು ಅಭಿವೃದ್ದಿ ಪರ ಸರಕಾರ. ವಿರೋಧ ಪಕ್ಷಗಳ ಮಾತಿಗೆ ಮೂರುಕಾಸು ಬೆಲೆ ಕೊಡಬೇಡಿ. ಈ ಕ್ಷೇತ್ರಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ನಮ್ಮ ಸರಕಾರ ಕಟಿಬದ್ದವಾಗಿದೆ ಎಂದು ಬೆನ್ನು ನೋವಿನಿಂದ ಬಳಲುತ್ತಿದ್ದರೂ ಆತ್ಮವಿಶ್ವಾಸ ತುಂಬಿದ ಧ್ವನಿಯಲ್ಲಿ ಕರಂದ್ಲಾಜೆ ಭರವಸೆ ಕೊಟ್ಟಿದ್ದಾರೆ. ಅವರ ಬೆನ್ನು ನೋವು ಮತ್ತು ಭಾರತದಲ್ಲಿ ಹಾವಳಿಗೆ ಇಟ್ಟುಕೊಂಡಿರುವ ಹಂದಿಜ್ವರ ಬೇಗ ಇಳಿಮುಖವಾಗಲೆಂದು ಇದೇ ಸಂದರ್ಭದಲ್ಲಿ ದಟ್ಸ್ ಕನ್ನಡ ಆಶಿಸುತ್ತದೆ.
ಇದೀಗ ತಾನೆ ನಮ್ಮ ವಾಹಿನಿಯನ್ನು ತಲುಪಿದ ಸುದ್ದಿಯ ಪ್ರಕಾರ ಬರುವ ಸೆಪ್ಟೆಂಬರ್ ಮಾಹೆಯಲ್ಲಿ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಮಾನ್ಯ ಮುಮಂ ಯಡ್ಡಿ ಅವರು ತಿಳಿಸಿದ್ದಾರೆ. ಅಷ್ಟು ಹೊತ್ತಿಗಾದರೂ ಬೆನ್ನು ನೋವು ಕಡಿಮೆ ಆದರೆ ಶೋಭಾ ಸಂಪುಟ ಸಭೆಯಲ್ಲಿ ಭಾಗವಹಿಸಿ, ಲವಲವಿಕೆಯಿಂದ ರಾಜ್ಯಭಾರ ಮಾಡುವಂತಹ ಪರಿಸ್ಥಿತಿ ಉದ್ಭವ ಆಗತ್ತೆ. ಹಾಗಾಗಲಿ. ಅಕಸ್ಮಾತ್ ಭಿನ್ನಮತೀಯ ಬಿಜೆಪಿ ಶಾಸಕರ ಒತ್ತಾಯಕ್ಕೆ ಯಡಿಯೂರಪ್ಪ ಮಣಿದು ಶೋಭಾ ಅವರಿಗೆ ರಜೆ ಕೊಟ್ಟರೆ ಬಲವಂತ ವಿಶ್ರಾಂತಿಯಿಂದ ನೋವು ನೀಗುತ್ತದೆ.
(ದಟ್ಸ್ ಕನ್ನಡ ವಾರ್ತೆ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications