Get Updates
Get notified of breaking news, exclusive insights, and must-see stories!

ಶೋಭಾ ಕರಂದ್ಲಾಜೆಗೆ ವಿಪರೀತ ಬೆನ್ನುನೋವು

Rural roads inflict back pain to Rural minister
ಚಿತ್ತಾಪುರ, ಆ. 12 : ಮಧ್ಯರಾತ್ರಿಯಲ್ಲಿ ಭಾರತದಲ್ಲಿ ಹೆಣ್ಣುಮಕ್ಕಳು ರಸ್ತೆಯಲ್ಲಿ ನಿರ್ಭೀತರಾಗಿ ನಡೆದುಹೋಗುವಂತಾಗಬೇಕು. ಆಗಷ್ಟೆ ನಮ್ಮ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ ಎಂಬಂತಹ ಮಾತುಗಳನ್ನು ಪರಮ ಪೂಜನೀಯ ಮಹಾತ್ಮಾ ಗಾಂಧೀಜಿ ಅವರು ಒಮ್ಮೆ ಹೇಳಿದ್ದರು. ಆದರೆ, ನಮ್ಮ ದೇಶದಲ್ಲಿ ದೊಡ್ಡವರ ಮಾತಿಗೆ ಎಳ್ಳಷ್ಟೂ ಬೆಲೆ ಇಲ್ಲ. ಉತ್ತರ ಕರ್ನಾಟಕದ ತುತ್ತತುದಿಯ ಜಿಲ್ಲೆಗಳಲ್ಲಿ ಪ್ರವಾಸ ಮಾಡಿನೋಡಿ. ಅಲ್ಲಿ ರಾತ್ರಿಹೊತ್ತು ಇರಲಿ, ಹಗಲು ಹೊತ್ತು ನಡೆಯುವುದೂ ದುರ್ಭರವಾಗಿದೆ. ನಡೆಯುವುದು ಬೇಡಾರೀ, ಅತ್ಯುತ್ತಮ ಶಾಕ್ ಅಬ್ ಸಾರ್ಬರ್ ಹೊಂದಿರುವ ಐಶಾರಾಮಿ ಕಾರಿನಲ್ಲಿ ತಿರುಗಾಡುವುದೂ ತುಂಬಾ ತ್ರಾಸ ಆಗಿದೆ ಎಂದರೆ ಏನರ್ಥ? ಅನರ್ಥ ಅನರ್ಥ.

ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯ ಮರೀಚಿಕೆ ಆಗಿರುವುದು ಆ ಜಿಲ್ಲೆಗಳಿಗೆ ಯಾವತ್ತೂ ಕಾಲಿಡದವರಿಗೂ ಗೊತ್ತು. ಈ ಪ್ರಾಂತ್ಯಗಳಲ್ಲಿ ಹಂದಿ ಮರಿ ಹಾಕುವ ರೀತಿಯಲ್ಲಿ ಎಂಟು ಹತ್ತು ಸಲ ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಿ ಅಧಿಕಾರ ಹಿಡಿದರೂ ಸ್ವಂತ ತಾಲೂಕುಗಳನ್ನು ಉದ್ಧಾರ ಮಾಡದ ಆಪಾದನೆ ಹೊತ್ತುಕೊಂಡು ಕರಟಕ ಮತ್ತು ದಮನಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ರಾಜಿನಾಮೆ ಕೊಡಬೇಕು ಎಂದು ದಟ್ಸ್ ಕನ್ನಡ ಆಗ್ರಹಿಸುತ್ತದೆ.

ಯಾಕೆಂದರೆ, ರಾಜ್ಯ ಸಂಪುಟದಲ್ಲಿರುವ ಏಕಮೇವ ಮಹಿಳಾ ಮಂತ್ರಿ ಶೋಭಾ ಕರಂದ್ಲಾಜೆ ಶ್ರಾವಣ ಮಂಗಳವಾರ ಚಿತ್ತಾಪುರ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಹೋಗಿ ಪಡಬಾರದ ಪಾಡು ಅನುಭವಿಸಿದ್ದಾರೆ. ಅವರು ಅನುಭವಿಸಿದ ಯಾತನೆ ಚಿತ್ತಾಪುರ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಅಲೆದವರಿಗೆ ಮಾತ್ರ ಗೊತ್ತಾಗುತ್ತದೆ. ಈ ಊರಿನ ಕಚಡ ರಸ್ತೆಗಳಲ್ಲಿ ಸುತ್ತಾಡಿ ನನಗೆ ಅಪಾರ ಬೆನ್ನು ನೋವು ಬಂದಿದೆ ಎಂದು ಶೋಭಾ ಅತೀವ ಬೇಜಾರುಪಟ್ಟುಕೊಂಡು ಮಾತನಾಡಿದ್ದಾರೆ.

ಕಳೆದ ಸುಮಾರು ಒಂದೇ ಒಂದು ವರ್ಷದಿಂದ ನಮ್ಮ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಈವರೆಗೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಪಕ್ಷಗಳು ಏನನ್ನು ಸಾಧಿಸಿವೆ? ಎಂದು ಅವರು ಚಿತ್ತಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಗುಡುಗಿದ್ದಾರೆ. ಇಲ್ಲಿಯ ರಸ್ತೆಗಳನ್ನು ನೋಡಿದರೆ ನಿಮಗೆ ತಿಳಿಯುವುದಿಲ್ಲವೇ, ಇಲ್ಲಿನ ರಸ್ತೆಗಳಲ್ಲಿ ಚುನಾವಣ ಪ್ರಚಾರ ಸಭೆಗೆ ಓಡಾಡಿ ನನ್ನ ಬೆನ್ನು ಬಿದ್ದು ಹೋಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ಅಂದಿನ ನಾಯಕರನ್ನು ಇಂದಿನ ವಿರೋಧ ಪಕ್ಷವನ್ನು ಏಕಕಾಲಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮದು ರೈತರ ಮತ್ತು ಅಭಿವೃದ್ದಿ ಪರ ಸರಕಾರ. ವಿರೋಧ ಪಕ್ಷಗಳ ಮಾತಿಗೆ ಮೂರುಕಾಸು ಬೆಲೆ ಕೊಡಬೇಡಿ. ಈ ಕ್ಷೇತ್ರಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ನಮ್ಮ ಸರಕಾರ ಕಟಿಬದ್ದವಾಗಿದೆ ಎಂದು ಬೆನ್ನು ನೋವಿನಿಂದ ಬಳಲುತ್ತಿದ್ದರೂ ಆತ್ಮವಿಶ್ವಾಸ ತುಂಬಿದ ಧ್ವನಿಯಲ್ಲಿ ಕರಂದ್ಲಾಜೆ ಭರವಸೆ ಕೊಟ್ಟಿದ್ದಾರೆ. ಅವರ ಬೆನ್ನು ನೋವು ಮತ್ತು ಭಾರತದಲ್ಲಿ ಹಾವಳಿಗೆ ಇಟ್ಟುಕೊಂಡಿರುವ ಹಂದಿಜ್ವರ ಬೇಗ ಇಳಿಮುಖವಾಗಲೆಂದು ಇದೇ ಸಂದರ್ಭದಲ್ಲಿ ದಟ್ಸ್ ಕನ್ನಡ ಆಶಿಸುತ್ತದೆ.

ಇದೀಗ ತಾನೆ ನಮ್ಮ ವಾಹಿನಿಯನ್ನು ತಲುಪಿದ ಸುದ್ದಿಯ ಪ್ರಕಾರ ಬರುವ ಸೆಪ್ಟೆಂಬರ್ ಮಾಹೆಯಲ್ಲಿ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾಗಿ ಮಾನ್ಯ ಮುಮಂ ಯಡ್ಡಿ ಅವರು ತಿಳಿಸಿದ್ದಾರೆ. ಅಷ್ಟು ಹೊತ್ತಿಗಾದರೂ ಬೆನ್ನು ನೋವು ಕಡಿಮೆ ಆದರೆ ಶೋಭಾ ಸಂಪುಟ ಸಭೆಯಲ್ಲಿ ಭಾಗವಹಿಸಿ, ಲವಲವಿಕೆಯಿಂದ ರಾಜ್ಯಭಾರ ಮಾಡುವಂತಹ ಪರಿಸ್ಥಿತಿ ಉದ್ಭವ ಆಗತ್ತೆ. ಹಾಗಾಗಲಿ. ಅಕಸ್ಮಾತ್ ಭಿನ್ನಮತೀಯ ಬಿಜೆಪಿ ಶಾಸಕರ ಒತ್ತಾಯಕ್ಕೆ ಯಡಿಯೂರಪ್ಪ ಮಣಿದು ಶೋಭಾ ಅವರಿಗೆ ರಜೆ ಕೊಟ್ಟರೆ ಬಲವಂತ ವಿಶ್ರಾಂತಿಯಿಂದ ನೋವು ನೀಗುತ್ತದೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+