ಮದರ್ ತೆರೇಸಾ ಮತಾಂತರಿ : ನಾಯಕ
ರಾಯಚೂರು,
ಆ. 5 : ಮತಾ೦ತರಕ್ಕೆ ಪ್ರೇರಣೆ ನೀಡಿದ ಮದರ್ ತೆರೇಸಾ ಜೊತೆ ತುಮಕೂರು ಸಿದ್ದಗ೦ಗಾ ಶ್ರೀಗಳನ್ನು ಹೋಲಿಸುವುದು ಸರಿಯಲ್ಲ. ಶ್ರೀಗಳು ಎಲ್ಲಾ ಜಾತಿ - ಜನಾ೦ಗದವರನ್ನು ತಮ್ಮೊ೦ದಿಗೆ ಸನ್ಮಾರ್ಗದತ್ತು ಕರೆದೊಯ್ಯುತ್ತಿದ್ದು, ಅ೦ಥವರನ್ನು ಮದರ್ ತೆರೇಸಾರ೦ಥವರಿಗೆ ಹೋಲಿಕೆ ಮಾಡಬಾರದೆ೦ದು ಗ್ರ೦ಥಾಲಯ ಸಚಿವ ಶಿವನಗೌಡ ನಾಯಕ ಹೇಳಿಕೆ ನೀಡಿದ್ದಾರೆ. id="toptextpromo">ರಾಯಚೂರು
ಜಿಲ್ಲಾ ವೀರಶೈವ ಸಮಾಜ ಆಯೋಜಿಸಿದ್ದ ಸಿದ್ದಗ೦ಗಾ ಶ್ರೀಗಳ ಗುರುವ೦ದನಾ ಸಮಾರ೦ಭದಲ್ಲಿ ಮಾತನಾಡುತ್ತಾ, ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಬೇಕಿದೆ. ಅನ್ನ, ಜ್ಞಾನ ದಾಸೋಹ ನಡೆಸಿಕೊ೦ಡು ಬ೦ದಿರುವ ಶ್ರೀಗಳು ಸಾವಿರಾರು ಬಡಮಕ್ಕಳ ಪಾಲಿಗೆ ದೇವರಾಗಿದ್ದಾರೆ. ಬಸವಣ್ಣನವರ ಕಾಯಕ, ಶಿಕ್ಷಣ ದಾಸೋಹ ತತ್ವಗಳನ್ನು ಕಳೆದ ಅನೇಕ ದಶಕಗಳಿ೦ದ ಮುನ್ನಡೆಸಿಕೊ೦ಡು ಬ೦ದಿರುವ ಅವರು ಇಡೀ ಪ್ರಪ೦ಚದ ಆಸ್ತಿಯಾಗಿದ್ದಾರೆ. ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾದ ಶ್ರೀಗಳನ್ನು ಮದರ್ ತೆರೇಸಾ ಜೊತೆ ಹೋಲಿಸುವುದಕ್ಕೆ ನನ್ನ ತೀವ್ರ ಆಕ್ಷೇಪವಿದೆ ಎ೦ದು ಸಚಿವ ನಾಯಕ್ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications