ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಂದಿಜ್ವರ ತಡೆಗೆ ನೂತನ ನಿಯಮ ಜಾರಿ : ಅಜಾದ್
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರದ ಆರೋಗ್ಯ ಇಲಾಖೆ ಸಚಿವ ಗುಲಾಮ್ ನಬಿ ಅಜಾದ್, ಸೋಮವಾರ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗದ ಕಾರಣ ಬಾಲಕಿಯೊಬ್ಬಳು ಹಂದಿಜ್ವರಕ್ಕೆ ಸಾವನ್ನಪ್ಪಿರುವುದು ವಿಷಾದಕರ ಸಂಗತಿ. ಇಂತಹ ಘಟನೆಗಳು ಪದೆಪದೇ ನಡೆಯಬಾರದು ಎನ್ನುವ ಉದ್ದೇಶದಿಂದ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ದೇಶದ ಎಲ್ಲ ಖಾಸಗಿ ಆಸ್ಪತ್ರೆಗೆ ಹಂದಿಜ್ವರ ಕುರಿತು ಸಮಗ್ರ ನೀತಿ ನಿಯಮಗಳನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ಆರೋಗ್ಯ ಸಚಿವ ಗುಲಾಮ್ ನಬಿ ಅಜಾದ್ ನೇತೃತ್ವದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ನರೇಶ್ ದಯಾಳ್, ಆರೋಗ್ಯ ಸಂಶೋಧನಾ ಇಲಾಖೆಯ ವಿ ಎನ್ ಕಟೋಚ್, ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
(ಏಜನ್ಸೀಸ್)
Comments
Story first published: Tuesday, August 4, 2009, 15:03 [IST]