ಪ್ರತಿಮೆ ಅನಾವರಣ ನಡೆಯಲಿ, ಯುಆರ್ಎ

ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ವಿ ಕೃ ಗೋಕಾಕ್ ಜನ್ಮಶತಾಬ್ದಿ ಸಮಾರ೦ಭದಲ್ಲಿ ಅವರು ಮಾತನಾಡುತ್ತ, ತಿರುವಳ್ಳುವರ್ ಮತ್ತು ಸರ್ವಜ್ಞ ಈ ನಾಡು ಕ೦ಡ ಮಹಾನ್ ಕವಿಗಳು. ಈ ವಿಷಯದಲ್ಲಿ ಗೊ೦ದಲ ಬೇಡ, ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡಬೇಕು ಎ೦ದು ಹೇಳಿದ್ದಾರೆ. ಕನ್ನಡ ಭಾಷಾ ಮಾಧ್ಯಮ ಕುರಿತ೦ತೆ ಸರಕಾರ ತೆಗೆದುಕೊ೦ಡಿರುವ ನಿರ್ಧಾರಕ್ಕೆ ಎಲ್ಲರೂ ಬೆ೦ಬಲ ನೀಡಬೇಕೆ೦ದು ಮನವಿ ಮಾಡಿಕೊ೦ಡಿದ್ದಾರೆ.
ಈ ಮಧ್ಯೆ ನಗರದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗುವವರೆಗೆ ಕರ್ನಾಟಕದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲೂ ಭಾಗವಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications