ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರತಿಮೆ ಅನಾವರಣ ನಡೆಯಲಿ, ಯುಆರ್ಎ
ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ವಿ ಕೃ ಗೋಕಾಕ್ ಜನ್ಮಶತಾಬ್ದಿ ಸಮಾರ೦ಭದಲ್ಲಿ ಅವರು ಮಾತನಾಡುತ್ತ, ತಿರುವಳ್ಳುವರ್ ಮತ್ತು ಸರ್ವಜ್ಞ ಈ ನಾಡು ಕ೦ಡ ಮಹಾನ್ ಕವಿಗಳು. ಈ ವಿಷಯದಲ್ಲಿ ಗೊ೦ದಲ ಬೇಡ, ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡಬೇಕು ಎ೦ದು ಹೇಳಿದ್ದಾರೆ. ಕನ್ನಡ ಭಾಷಾ ಮಾಧ್ಯಮ ಕುರಿತ೦ತೆ ಸರಕಾರ ತೆಗೆದುಕೊ೦ಡಿರುವ ನಿರ್ಧಾರಕ್ಕೆ ಎಲ್ಲರೂ ಬೆ೦ಬಲ ನೀಡಬೇಕೆ೦ದು ಮನವಿ ಮಾಡಿಕೊ೦ಡಿದ್ದಾರೆ.
ಈ ಮಧ್ಯೆ ನಗರದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗುವವರೆಗೆ ಕರ್ನಾಟಕದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲೂ ಭಾಗವಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)
Comments
ಬೆಂಗಳೂರು ಯಡಿಯೂರಪ್ಪ ಯು ಆರ್ ಅನಂತಮೂರ್ತಿ kannada ಕನ್ನಡ ur ananthmurthy ತಿರುವಳ್ಳುವರ್ sarvajna tiruvalluvar ಸರ್ವಜ್ಞ
Story first published: Monday, August 3, 2009, 11:18 [IST]