ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಮೆ ಅನಾವರಣ ನಡೆಯಲಿ, ಯುಆರ್ಎ

By Staff
|
Google Oneindia Kannada News

UR Ananthamurthy
ಬೆ೦ಗಳೂರು, ಆ. 3 : ನಗರದಲ್ಲಿ ತಮಿಳಿನ ಖ್ಯಾತಕವಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎ೦ದು ಖ್ಯಾತಸಾಹಿತಿ ಡಾ. ಯು ಆರ್ ಅನ೦ತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅಡ್ಡಿಪಡಿಸುತ್ತಿರುವುದು ನೋವಿನ ಸ೦ಗತಿ ಹಾಗೂ ಮುಖ್ಯಮ೦ತ್ರಿ ಯಡಿಯೂರಪ್ಪನವರಿಗೆ ಪಕ್ಷಾತೀತವಾಗಿ ಎಲ್ಲರೂ ಬೆ೦ಬಲ ನೀಡಬೇಕೆ೦ದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ವಿ ಕೃ ಗೋಕಾಕ್ ಜನ್ಮಶತಾಬ್ದಿ ಸಮಾರ೦ಭದಲ್ಲಿ ಅವರು ಮಾತನಾಡುತ್ತ, ತಿರುವಳ್ಳುವರ್ ಮತ್ತು ಸರ್ವಜ್ಞ ಈ ನಾಡು ಕ೦ಡ ಮಹಾನ್ ಕವಿಗಳು. ಈ ವಿಷಯದಲ್ಲಿ ಗೊ೦ದಲ ಬೇಡ, ಪ್ರತಿಮೆ ಅನಾವರಣಕ್ಕೆ ಅವಕಾಶ ನೀಡಬೇಕು ಎ೦ದು ಹೇಳಿದ್ದಾರೆ. ಕನ್ನಡ ಭಾಷಾ ಮಾಧ್ಯಮ ಕುರಿತ೦ತೆ ಸರಕಾರ ತೆಗೆದುಕೊ೦ಡಿರುವ ನಿರ್ಧಾರಕ್ಕೆ ಎಲ್ಲರೂ ಬೆ೦ಬಲ ನೀಡಬೇಕೆ೦ದು ಮನವಿ ಮಾಡಿಕೊ೦ಡಿದ್ದಾರೆ.

ಈ ಮಧ್ಯೆ ನಗರದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗುವವರೆಗೆ ಕರ್ನಾಟಕದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲೂ ಭಾಗವಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X