ನೇತ್ರದಾನ ನೋಂದಣಿ ಮಾಡಿದ ಶ್ರೀರಾಮುಲು
ಬಳ್ಳಾರಿ,
ಜು. 27 : ಬಳ್ಳಾರಿ ಎಂದ ತಕ್ಷಣ ನನೆಪಿಗೆ ಬರುವುದು ರೆಡ್ಡಿ ಸಹೋದರರು ಮತ್ತು ಆರೋಗ್ಯ ಮಂತ್ರಿ ಬಿ ಶ್ರೀರಾಮುಲು. ಇದರ ಬೆನ್ನಲ್ಲೇ ಇವರ ರಾಜಕೀಯ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ವಿವಾದಕ್ಕೆ ಈ ಹೆಸರುಗಳು ಭಾರಿ ಚಾಲ್ತಿಯಲ್ಲಿವೆ. ಆದರೆ, ಸಚಿವ ಶ್ರೀರಾಮುಲು ಇದೀಗ ವಿಶಿಷ್ಟ ಹಾಗೂ ಶ್ರೇಷ್ಠ ಸುದ್ದಿಗೆ ಭಾಜನರಾಗಿದ್ದಾರೆ. id="toptextpromo">ಸ್ವತಃ
ಆರೋಗ್ಯ ಮಂತ್ರಿಯಾಗಿರುವ ಅವರು ಅಂಧರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಶ್ರೀರಾಮುಲು, ಅಂಧರ ಬೆಳಕಾಗುವ ಈ ಶ್ರೇಷ್ಠ ದಾನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಪತ್ನಿ ಭಾಗ್ಯಲಕ್ಷ್ಮಿ ಅವರ ಕಣ್ಣುಗಳನ್ನು ದಾನ ಮಾಡಿದರು. ಸಚಿವರು ದಾನಪತ್ರಕ್ಕೆ ಸಹಿ ಮಾಡಿದ ನಂತರ ಅನೇಕರು ನೇತ್ರದಾನಕ್ಕೆ ಮುಂದಾಗಿದ್ದು ವಿಶೇಷವಾಗಿತ್ತು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications