ನೈಸ್ ಯೋಜನೆ ತಡೆಯಲು ಸಾಧ್ಯವಿಲ್ಲ : ಖೇಣಿ

Ashok Kheni
ಬೆಂಗಳೂರು, ಜು. 27 : ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರು ನೈಸ್ ರಸ್ತೆ ನಿರ್ಮಾಣ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಂದ ಅಷ್ಟೇ ಅಲ್ಲ ಯಾವುದೇ ರಾಜಕಾರಣಿ ಹಾಗೂ ಅಧಿಕಾರಿಗಳಿಂದ ಈ ಯೋಜನೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನಮಠ ಮತ್ತು ಕೆಂಗಲ್ ಹನುಮಂತಯ್ಯ ಹಾಸ್ಟೆಲ್ ಟ್ರಸ್ಟ್ ಆಯೋಜಿಸಿದ್ದ ಬಿಜಿಎಸ್ ಮಹಿಳಾ ವಿದ್ಯಾರ್ಥಿನಿಲಯದ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸದರಿ ರಾಜಕಾರಣಿಯು ಯೋಜನೆಯ ವ್ಯಾಪ್ತಿಯಲ್ಲಿ ತಮ್ಮ ಮಗನ ಹಾಗೂ ಪತ್ನಿಯ ಜಮೀನು ಇರುವುದರಿಂದ ಯೋಜನೆಯ ಮಾರ್ಗ ಬದಲಿಸುವಂತೆ ಸೂಚಿಸಿದರು. ಇದರಕ್ಕೆ ನಿರಾಕರಿಸಿದ್ದರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಮಗೆ ನೈಸ್ ಮುಖ್ಯವಲ್ಲ. ಬದಲಿಗೆ ಯೋಜನೆಯನ್ನು ಹೇಗೆ ಪೂರ್ಣಗೊಳಿಸುತ್ತೇನೆ ಎಂಬುದು ಮುಖ್ಯ ಎಂದು ಸವಾಲಿನ ದಾಟಿಯಲ್ಲಿ ಹೇಳಿದರು.

ನೈಸ್ ಕಾರಿಡಾರ್ ನಿರ್ಮಿಸಲು ವಶಪಡಿಸಿಕೊಂಡಿರುವ ಜಮೀನಿನ ಮೌಲ್ಯ ಎಕರೆಗೆ 60 ಸಾವಿರವಿದ್ದರೆ ಕಂಪನಿಯು 6 ಲಕ್ಷ ರುಪಾಯಿಗಳನ್ನು ನೀಡಿದೆ. ಇದರಿಂದ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಮಾರಾಟ ಮಾಡಿದ್ದಾರೆ. ಯೋಜನೆಗೆ 20 ಸಾವಿರ ಎಕರೆ ಸಾಕಿತ್ತು. ಆದರೆ, ರೈತರೇ ಖುದ್ದಾಗಿ ಜಮೀನು ಮಾರಾಟ ಮಾಡಿದ್ದರಿಂದ 40 ರಿಂದ 50 ಸಾವಿರ ಎಕರೆಯನ್ನು ಖರೀದಿಸಬೇಕಾಯಿತು ಎಂದರು.

ಸಂಸ್ಥೆಗೆ 5 ಎಕರೆಯನ್ನು ಮಾರಿದ ರೈತರು ಇದೇ ಮೊತ್ತದಲ್ಲಿ 10 ಎಕರೆಯನ್ನು ಖರೀದಿಸಿದ್ದಾರೆ. ನೈಸ್ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಕಂಪನಿಯೂ ರೈತರಿಗೆ ವಂಚನೆ ಮಾಡಿಲ್ಲ. ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ನಲ್ಲಿ ಆದಿಚುಂಚನಗಿರಿ ಮಠವು ಶಾಲೆ, ಕಾಲೇಜು, ಆಸ್ಪತ್ರೆಯನ್ನು ತೆರೆಯಬೇಕು ಎಂದು ಮನವಿ ಮಾಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+