ವೀರಯೋಧರಿಗೆ ತಲಾ 5 ಲಕ್ಷ ರು. ಗೌರವಧನ

ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮರಣಾರ್ಥ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿದ ಮಾತನಾಡಿದ ಯಡಿಯೂರಪ್ಪ, ಕಾರ್ಗಿಲ್ ಯುದ್ಧದ ದಶಮಾನೋತ್ಸವ ಸಂದರ್ಭದಲ್ಲಿ ಯೋಧರ ಕುಟುಂಬ ನೆಮ್ಮದಿಯಿಂದ ಬಾಳಬೇಕಿರುವ ಉದ್ದೇಶದಿಂದ ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಗೌರವಧನವನ್ನು ಚೆಕ್ ರೂಪದಲ್ಲಿ ವಿತರಿಸಲಾಗುವುದು ಎಂದರು.
ಯೋಧರ ತಂದೆ-ತಾಯಿ, ಮಡದಿ ಮಕ್ಕಳಿಗೆ ಹಣವನ್ನು ವರ್ಗೀಕರಿಸಿ ನೀಡಲಾಗುವುದು. ಅಲ್ಲದೆ ಯುದ್ಧದಲ್ಲಿ ನೂರಾರು ಮಂದಿ ಯೋಧರು ಗಾಯಗೊಂಡು ಕೆಲವರು ಚೇತರಿಸಿಕೊಂಡಿದ್ದಾರೆ. ಕೆಲವರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಸಂಕಷ್ಟದಲ್ಲಿರುವ ಈ ಯೋಧರ ಯೋಗಕ್ಷೇಮದ ದೃಷ್ಟಿಯಿಂದ ಗಾಯಾಳು ಯೋಧರಿಗೆ ತಲಾ 1 ಲಕ್ಷ ರುಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರದ ಗಡಿಗಳನ್ನು ಸುಭದ್ರವಾಗಿರಿಸಿ ನಾಗರಿಕರ ನೆಮ್ಮದಿ ಹಾಗೂ ಸುರಕ್ಷಿತ ಬದುಕಿಗೆ ಹಗಲು ರಾತ್ರಿ ದುಡಿಯುತ್ತಿರುವ ಯೋಧರು ಪ್ರಾಣ ತ್ಯಾಗ ಮಾಡಿದವರು ಮತ್ತು ಗಾಯಾಳು ಕುಟುಂಬಗಲ ಯೋಗಕ್ಷೇಮ ಸರಕಾದ ಕರ್ತವ್ಯವಾಗಿದೆ. 1999ರ ಜುಲೈ 26 ರಂದು ಕಾರ್ಗಿಲ್ ಕದನದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ವಿಜಯ ಪತಾಕೆ ಹಾರಿಸಿತ್ತು. ಈ ಸಂದರ್ಭದಲ್ಲಿ 533 ಮಂದಿ ಯೋಧರು ವೀರಮರಣ ಅಪ್ಪಿದ್ದರು. ಈ ಪೈಕಿ 15 ಮಂದಿ ಕರ್ನಾಟಕದವರಾಗಿರುವುದು ನಾವೆಲ್ಲ ಹೆಮ್ಮಪಡುವಂತ ಸಂಗತಿ ಎಂದರು.
ಕಾರ್ಗಿಲ್ ಕದನದಲ್ಲಿ ವೀರಮರಣ ಅಪ್ಪಿದ ಯೋಧರು ಹೆಸರುಗಳು
* ತೊಂಡಿಬಾ ನಾರಾಯಣ ದೇಸಾಯಿ
* ಮೊಹಿಲಿನ ಸುಬ್ರಮಣ್ಯ
* ಸಿದ್ಧನಗೌಡ ಪಾಟೀಲ್
* ಯಶವಂತ ಕೋಲ್ಕಾರ
* ಭರತ್ ಮಸ್ಕಿ
* ಬಸಪ್ಪ ಚೌಗಲಾ
* ದಿಲೀಪ್ ಪೊತೇದಾರ್
* ಶಿವಬಸಯ್ಯ ಕುಲಕರ್ಣಿ
* ದಾವಲಸಾಬ್ ಅಲ್ಲೀಸಾಬ್ ಕುಂಬಾರ
* ಅಶೋಕ್ ಭೀಮಪ್ಪ ಜಾಧವ
* ಪಿ ಡಿ ಕಾವೇರಪ್ಪ
* ಎಸ್ ಕೆ ಮೇದಪ್ಪ
* ಮಲ್ಲಯ್ಯ ಮೇಗಳಮಠ
* ಎಚ್ ವಿ ವೆಂಕಟ್
* ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ್
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications