ಐದೂ ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಕಾರ್ಯತಂತ್ರ

ಬೆಂಗಳೂರು, ಜು. 27 : ಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಎಲ್ಲಾ ಐದು ಕ್ಷೇತ್ರಗಳಲ್ಲಿ ಗೆಲ್ಲಲು ಯಾವ ರೀತಿ ಕಾರ್ಯತಂತ್ರ ರೂಪಿಸಬೇಕೆಂದು ನಿರ್ಧರಿಸಲು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ಮುಂದಿನ ತಿಂಗಳು 1 ಮತ್ತು 2 ರಂದು ಕರೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕಳೆದೆರಡು ದಿನಗಳಿಂದ ಸಂಬಂಧಪಟ್ಟ ಕ್ಷೇತ್ರಗಳ ನಾಯಕರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ವಸತಿ ಸಚಿವ ಸೋಮಣ್ಣ ಅವರನ್ನು ಪುನರಾಯ್ಕೆ ಮಾಡುವುದು ಪಕ್ಷದ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಚನ್ನಪಟ್ಟಣದಿಂದ ಯೋಗೀಶ್ವರ ಅವರನ್ನು ಮತ್ತೆ ಗೆಲ್ಲಿಸುವುದು ಕೂಡ ಪಕ್ಷದ ಮುಖ್ಯ ಅಜಂಡಾ. ರಾಮನಗರದಲ್ಲಿ ಅಭ್ಯರ್ಥಿ ಹುಡುಕಾಟದಲ್ಲಿ ಬಿಜೆಪಿ ಎಚ್ಚರಿಕೆ ಹೆಜ್ಜೆಯಿಡುತ್ತಿದೆ. ಈಗಾಗಲೇ ಉಪಚುನಾವಣೆಗೆ ಸಂಬಂಧಪಟ್ಟಂತೆ ನಾಲ್ಕು ಕ್ಷೇತ್ರಗಳ ಉಸ್ತುವಾರಿಯನ್ನು ಹಂಚಲಾಗಿದೆ.

* ಚಿತ್ತಾಪುರ - ಲಕ್ಷ್ಮಣ ಸವದಿ, ರೇವೂನಾಯಕ್ ಬೆಳಮಗಿ, ಕೆ ಎಸ್ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಸಿ ಎಂ ಉದಾಸಿ.
* ಕೊಳ್ಳೇಗಾಲ - ಅರವಿಂದ್ ಲಿಂಬಾವಳಿ, ಶ್ರೀರಾಮುಲು, ಹರತಾಳ್ ಹಾಲಪ್ಪ, ಕೃಷ್ಣ ಪಾಲೇಮಾರ್ ಮತ್ತು ಎ ರಾಮದಾಸ್.
* ಚನ್ನಪಟ್ಟಣ - ಕಟ್ಟಾ ಸುಬ್ರಮಣ್ಯ ನಾಯ್ಡು, ಬಚ್ಚೇಗೌಡ, ರಾಮಚಂದ್ರೇಗೌಡ, ಶಿವರಾಜ್ ತಂಗಡಗಿ, ಮುರುಗೇಶ್ ನಿರಾಣಿ ಮತ್ತು ಡಿ ಬಿ ಚಂದ್ರೇಗೌಡ
* ಗೋವಿಂದರಾಜನಗರ - ಅನಂತ್ ಕುಮಾರ್, ಅಶೋಕ್, ಸುರೇಶ್ ಕುಮಾರ್ ಮತ್ತು ರವೀ೦ದ್ರನಾಥ

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+