ಭವಾನಿ ರೇವಣ್ಣ ಸ್ಪರ್ಧಿಸಲ್ಲ : ದೇವೇಗೌಡ

ಈಗಾಗಲೇ ಪಕ್ಷ ಎದುರಿಸುತ್ತಿರುವ ಕುಟುಂಬ ರಾಜಕಾರಣ ಎಂಬ ಆರೋಪಕ್ಕೆ ಮತ್ತಷ್ಟು ಇಂಬು ನೀಡುವುದು ಬೇಡ. ಸ್ಥಳೀಯರನ್ನು ಅಖಾಡಕ್ಕೆ ಇಳಿಸೋಣ ಎಂಬ ಸಲಹೆಯನ್ನು ಗೌಡರು ಪಕ್ಷದ ಎರಡನೇ ಹಂತದ ನಾಯಕರಿಗೆ ನೀಡಿದ್ದಾರೆ. ಈ ಹಿಂದೆ ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಚಿತ್ರನಟ ಅಂಬರೀಶ್ ಅವರನ್ನು ಪಕ್ಷ ಕಣಕ್ಕೆ ಇಳಿಸಿದಾಗ ಅವರು ಹೊರಗಿನವರು ಎಂಬ ಕಾರಣಕ್ಕೆ ಸ್ಥಳೀಯರಾದ ಸಿ ಎಂ ಲಿಂಗಪ್ಪ ಆಯ್ಕೆಯಾಗಿದ್ದರು. ಇದೀಗ ಲಿಂಗಪ್ಪ ಸೆಳೆದು ಅಭ್ಯರ್ಥಿಯಾಗಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಅದ್ದರಿಂದ ಈ ಹಂತದಗಲ್ಲಿ ಸ್ಥಳೀಯರನ್ನು ಸ್ಪರ್ಧೆಗೆ ಇಳಿಸುವುದು ಸೂಕ್ತ ಎಂದು ಹೇಳಿದರು.
ಪ್ರಿಯಾಂಕಾ ಖರ್ಗೆ ಟಿಕೆಟ್ ಕೊಡಿ : ಯುವ ಕಾಂಗ್ರೆಸ್
ಚಿತ್ತಾಪುರ ವಿಧಾನಸಭೆಗೆ ನಡೆಯುಲಿರುವ ಮರುಚುನಾವಣೆಯಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಪ್ರದೇಶ ಯುವ ಕಾಂಗ್ರೆಸ್ ಒತ್ತಾಯಿಸಿದೆ. ಇನ್ನೊಂದಡೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ಖಾಲಿಯಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಸಿ ಎಂ ಲಿಂಗಪ್ಪ ಅವರನ್ನು ಕಣಕ್ಕಿಳಿಸುವಂತೆ ತೀವ್ರ ಒತ್ತಡ ಆರಂಭವಾಗಿದೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣ ಭೈರೇಗೌಡ ಅವರು ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕ ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿ ಮಾಡಬೇಕು ಎಂದು ಕೆಪಿಸಿಸಿ ಮುಖಂಡರಿಗೆ ಮನವಿ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಖರ್ಗೆ ಅವಕರು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಎಂದು ಪರಿಗಣಿಸದೆ ಯುವ ಕಾರ್ಯಕರ್ತಎಂದು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications