Get Updates
Get notified of breaking news, exclusive insights, and must-see stories!

ಬೆಂಕಿಯಿಟ್ಟ ಸಂಸದನಿಗೆ 'ಸಕ್ಕರೆ' ಕೊಟ್ಟ ಮಾಯಾ

Maya rewards MLA accused of torching Joshi's house
ಲಕ್ನೊ, ಜು. 20: ತನ್ನನ್ನು ಅವಹೇಳನ ಮಾಡಿದ್ದ ಉತ್ತರಪ್ರದೇಶದ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ ಅವರ ಮನೆಗೆ ಬೆಂಕಿ ಇಟ್ಟಿರುವ ಆರೋಪಕ್ಕೊಳಗಾಗಿರುವ ಪಕ್ಷದ ಸಂಸದ ಇಂತೆಜಾರ್ ಅಬ್ಡಿಗೆ ಮಾಯಾ ಕೊಟ್ಟ ಬಹುಮಾನ ಏನೂ ಗೊತ್ತೇ ?ರಾಜ್ಯ ಸಚಿವ ಖಾತೆಗೆ ಸಮನಾದ ಉತ್ತರ ಪ್ರದೇಶ ರಾಜ್ಯ ಸಕ್ಕರೆ ಮಂಡಳಿ ಅಧ್ಯಕ್ಷ ಸ್ಥಾನ!! ಇದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ದರ್ಬಾರ್!!

ತನ್ನ ನಾಯಕಿಯ ವಿರುದ್ಧ ಮಾತಾಡಿದ ರೀಟಾ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಬ್ಡಿಗೆ ಕಳೆದ ವಾರವೇ ಮಾಯಾವತಿ ಈ ಹುದ್ದೆ ನೀಡಬೇಕೆಂದು ನಿಶ್ಚಯಿಸಿದ್ದರೆಂದು ವರದಿಯಾಗಿದೆ. ಅಲ್ಲದೇ ಸಂಸದನಿಗೆ ಈ ಪದವಿ ನೀಡುತ್ತಿರುವುದನ್ನು ಬಿಎಸ್ಪಿ ಸಮರ್ಥಿಸಿಕೊಂಡಿದೆ. ಮಾಯಾವತಿಯ ಸರ್ವಾಧಿಕಾರಿ ವರ್ತನೆಗೆ ಕಿಡಿಕಾರಿರುವ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್, ಮಾಯಾ ಅವರಿಗೆ ಕಾನೂನಿನ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ. ಎಫ್ಐಆರ್ ದಾಖಲಾಗಿರುವ ವ್ಯಕ್ತಿಗೆ ಈ ಹುದ್ದೆ ನೀಡಿ ಇಂತಹ ತಲೆ ತಗ್ಗಿಸುವಂತ ಘಟನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಜರಿದಿದ್ದಾರೆ.

ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ, ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ನಿವಾಸಕ್ಕೆ ಬೆಂಕಿ ಇಟ್ಟ ಆರೋಪಿಗೆ ಸರಕಾರ ಉತ್ತೇಜನ ನೀಡುತ್ತಿದೆ. ಹೈಕಮಾಂಡ್ ಜೊತೆ ಮಾತನಾಡಿ ಘಟನೆಯ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

(ಏಜನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+