ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಕಿಯಿಟ್ಟ ಸಂಸದನಿಗೆ 'ಸಕ್ಕರೆ' ಕೊಟ್ಟ ಮಾಯಾ
ತನ್ನ ನಾಯಕಿಯ ವಿರುದ್ಧ ಮಾತಾಡಿದ ರೀಟಾ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಬ್ಡಿಗೆ ಕಳೆದ ವಾರವೇ ಮಾಯಾವತಿ ಈ ಹುದ್ದೆ ನೀಡಬೇಕೆಂದು ನಿಶ್ಚಯಿಸಿದ್ದರೆಂದು ವರದಿಯಾಗಿದೆ. ಅಲ್ಲದೇ ಸಂಸದನಿಗೆ ಈ ಪದವಿ ನೀಡುತ್ತಿರುವುದನ್ನು ಬಿಎಸ್ಪಿ ಸಮರ್ಥಿಸಿಕೊಂಡಿದೆ. ಮಾಯಾವತಿಯ ಸರ್ವಾಧಿಕಾರಿ ವರ್ತನೆಗೆ ಕಿಡಿಕಾರಿರುವ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್, ಮಾಯಾ ಅವರಿಗೆ ಕಾನೂನಿನ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ. ಎಫ್ಐಆರ್ ದಾಖಲಾಗಿರುವ ವ್ಯಕ್ತಿಗೆ ಈ ಹುದ್ದೆ ನೀಡಿ ಇಂತಹ ತಲೆ ತಗ್ಗಿಸುವಂತ ಘಟನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಜರಿದಿದ್ದಾರೆ.
ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ, ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ನಿವಾಸಕ್ಕೆ ಬೆಂಕಿ ಇಟ್ಟ ಆರೋಪಿಗೆ ಸರಕಾರ ಉತ್ತೇಜನ ನೀಡುತ್ತಿದೆ. ಹೈಕಮಾಂಡ್ ಜೊತೆ ಮಾತನಾಡಿ ಘಟನೆಯ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
(ಏಜನ್ಸೀಸ್)
Story first published: Monday, July 20, 2009, 15:06 [IST]