ಎಫ್ಎಂ ಚಾನಲ್ ಆಗ್ರಹಿಸಿ ಸಾಹಸಿಗರ ದೋಣಿಯಾನ

Adventure academy members
ಶಿವಮೊಗ್ಗ, ಜು. 20 : ಶಿವಮೊಗ್ಗಕ್ಕೆ ಎಫ್ಎಂ ರೇಡಿಯೋ ಚಾನಲ್ ನೀಡಬೇಕೆಂದು ಆಗ್ರಹಿಸಿ ನಗರದ ಸಾಹಸ ಅಕಾಡೆಮಿಯ ಸದಸ್ಯರು ಭರ್ತಿಯಾಗಿ ಹರಿಯುತ್ತಿರುವ ತುಂಗೆಯಲ್ಲಿಯೇ ಬೋಟಿನ ಮುಖಾಂತರ ಸಾಗಿ ವಿನೂತನ ರೀತಿಯಲ್ಲಿ ಜನರ ಗಮನ ಸೆಳೆದರು.

ಎಫ್ಎಂ ಚಾನಲ್ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಾಹಸ ಅಕಾಡೆಮಿ ಸದ್ಯದಲ್ಲಿಯೇ ಮನವಿ ಸಲ್ಲಿಸಲಿದೆ.

ಶಿವಮೊಗ್ಗದ ಬೈಪಾಸ್ ಸೇತುವೆ ಬಳಿಯಿಂದ ಸಾಗಿ ಸುಮಾರು 25 ಕಿ.ಮೀ. ದೂರದಲ್ಲಿರುವ ಕೂಡಲಿವರೆಗೂ ಬೋಟಿನಲ್ಲಿ ಸಾಗಿದರು. ಸಾಹಸ ಅಕಾಡೆಮಿಯ ಸದಸ್ಯರೊಡನೆ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ, ಮುರುಗನ್, ಅಮರೀಶ್, ಎಎನ್ ವಿಜಯೇಂದ್ರ, ಶ್ರೀನಾಥ್ ನಗರಗದ್ದೆ, ವಾದಿರಾಜ್, ಗಿರೀಶ್ ಮತ್ತು ಕೆಲ ಪುಟಾಣಿಗಳೂ ಸಹ ಈ ಯಾನದಲ್ಲಿ ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷರಾದ ಎನ್ ಜೆ ರಾಜಶೇಖರ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಎಫ್ಎಂ ರೇಡಿಯೋ ಚಾನಲ್ ಮತ್ತು ಪರಿಸರ ಉಳಿವಿಗಾಗಿಯೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ಈ ಅಭಿಯಾನವನ್ನು ಕೈಗೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+