Get Updates
Get notified of breaking news, exclusive insights, and must-see stories!

ವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ

Karnataka Assembly Polls 2009
ಬೆಂಗಳೂರು, ಜು.19:ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದ್ದು, ಆಗಸ್ಟ್ 18ರಂದು ಮತದಾನ ನಡೆಯಲಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಪಿಜಿಆರ್ ಸಿಂಧ್ಯಾ, ಎಂ ಶಿವಣ್ಣ, ಪ್ರಿಯಾಂಕ್ ಖರ್ಗೆ ಕಣಕ್ಕಿಳಿಯಳಿರುವ ಪ್ರಮುಖರಾಗಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ (ಪ.ಜಾ. ಮೀಸಲು), ಬಿಬಿಎಂಪಿ ದಕ್ಷಿಣ ವಿಭಾಗದ ಗೋವಿಂದರಾಜನಗರ, ರಾಮನಗರ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ (ಪ.ಜಾ. ಮೀಸಲು) ಕ್ಷೇತ್ರಗಳಿಗೆ ಚುನಾವಣೆ ಘೋಷಿಸಲಾಗಿದ್ದು, ವೇಳಾಪಟ್ಟಿ ಹೀಗಿದೆ:

ಜುಲೈ 22ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ. ಜುಲೈ30ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸು ಪಡೆಯಲು ಆಗಸ್ಟ್ 1 ಕೊನೆಯ ದಿನ. ಆಗಸ್ಟ್ ೧೮ರಂದು ಮತದಾನ ನಡೆಯಲಿದ್ದು, 21ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಆಗಸ್ಟ್ 23 ರಂದು ಕೊನೆಗೊಳ್ಳಲಿದೆ. ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಉಪ ಚುನಾವಣೆಗಳು ನಡೆಯುವ ಜಿಲ್ಲೆಗಳಿಗೆ ಮಾತ್ರ ನೀತಿ ಸಂಹಿತೆ ಅನ್ವಯಿಸುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್. ಸುರಂಜನ ಅವರು ತಿಳಿಸಿದರು.

ಈ ಉಪ ಚುನಾವಣೆಗಳಲ್ಲಿ ದಿನಾಂಕ 1-1-2009 ರಂದು ಅರ್ಹತಾ ದಿನಾಂಕವೆಂದು ಪರಿಗಣಿಸಿ ತಯಾರಿಸಲಾದ ಮತದಾರರ ಪಟ್ಟಿಗಳನ್ನು ಬಳಸಲಾಗುವುದು. ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರ ವಿವರ ಹೀಗಿದೆ:
ಚಿತ್ತಾಪುರ- 1,81,233;
ಗೋವಿಂದರಾಜನಗರ- 2,70,840;
ರಾಮನಗರ- 1,76,153;
ಚನ್ನಪಟ್ಟಣ- 1,86,078;
ಕೊಳ್ಳೇಗಾಲ-1,82,927.

ಮತಗಟ್ಟೆಗಳು: ಚಿತ್ತಾಪುರ ಕ್ಷೇತ್ರದಲ್ಲಿ 200 ಮತಗಟ್ಟೆಗಳಿದ್ದು, ಗೋವಿಂದರಾಜನಗರದಲ್ಲಿ 215, ರಾಮನಗರದಲ್ಲಿ 251, ಚನ್ನಪಟ್ಟಣ 277 ಹಾಗೂ ಕೊಳ್ಳೇಗಾಲದಲ್ಲಿ 197 ಮತಗಟ್ಟೆಗಳಿವೆ. ಈ ಉಪಚುನಾವಣೆಗೆ ಒಟ್ಟು 6000 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ಸಿ.ಎಸ್. ಸುರಂಜನ ವಿವರಿಸಿದರು.

(ದಟ್ಸ್ ಕನ್ನಡವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+