ಪ್ರೊ.ಸಭರ್ವಾಲ್ ಹತ್ಯೆಆರೋಪಿಗಳ ಖುಲಾಸೆ

ವಿಮಲ್ ತೋಮರ್, ಪಂಕಜ್ ಮಿಶ್ರಾ, ವಿಮಲ್ ರಜೋರಿಯಾ, ಶಶಿರಂಜನ್ ಅಕೇಲಾ, ಹೇಮಂತ್ ದುಬೆ, ಸುಧೀರ್ ಯಾದವ್ ನಿರ್ದೋಷಿಗಳು ಎಂದು ನಾಗ್ಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನಿತಿನ್ ದಳವಿ ಘೋಷಿಸಿದ್ದಾರೆ. ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರೊ.ಸಭರ್ವಾಲ್ ಮಧ್ಯಪ್ರದೇಶದ ಉಜ್ಜಯಿನಿಯ ಮಾಧವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾಗಿದ್ದರು. 2006ರ ಆಗಸ್ಟ್ನಲ್ಲಿ ಕಾಲೇಜು ವಿದ್ಯಾರ್ಥಿ ಚುನಾವಣೆ ಸಂದರ್ಭ ಉಂಟಾದ ಗಲಭೆಯಲ್ಲಿ ಅವರ ಮೇಲೆ ದಾರುಣ ಹಲ್ಲೆ ನಡೆದಿತ್ತು. ಬಳಿಕ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
(ಎಜೆನ್ಸೀಸ್)












Click it and Unblock the Notifications