ಹೂಳೆತ್ತುವ ಕಾರ್ಯಕ್ಕೆ ನೂತನ ತಾಂತ್ರಿಕತೆ ಬಳಕೆ

ಬೆಂಗಳೂರು, ಜು. 14 : ರಾಜ್ಯದಲ್ಲಿ ಒಟ್ಟು 63 ಜಲಾಶಯಗಳಿದ್ದು ಅವುಗಳ ಹೂಳೆತ್ತುವ ಕಾರ್ಯ ಈವರೆಗೆ ಮಾಡಿಲ್ಲದ ಕಾರಣ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿವರವಾದ ಅಧ್ಯಯನಮಾಡಿ ಪ್ರತಿಯೊಂದು ಜಲಾಶಯದಲ್ಲಿರುವ ಹೂಳಿನ ಪ್ರಮಾಣವನ್ನು ಅಂದಾಜು ಮಾಡಿ ಆಧುನಿಕ ತಾಂತ್ರಿಕತೆಯನ್ನು ಬಳಸಿ ಮಾಡಲಾಗುತ್ತದೆ. ಧೂಪಧಾಳ ಜಲಾಶಯದಲ್ಲಿ ಪ್ರಾಯೋಗಿಕವಾಗಿ ನೂತನ ತಾಂತ್ರಿಕತೆ ಬಳಸಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಆಲಮಟ್ಟಿ 5 ಟಿ.ಎಂ.ಸಿ, ತುಂಗಭದ್ರಾ 28.1 ಟಿಎಂಸಿ, ಮಲಪ್ರಭಾ 2.2 ಟಿಎಂಸಿ, ಭದ್ರಾ 1 ಟಿಎಂಸಿ, ಹಾರಂಗಿ 5.5 ಟಿಎಂಸಿ, ಹೇಮಾವತಿ 2.5 ಟಿಎಂಸಿ ಕ್ಷಮತೆಯನ್ನು ಕಳೆದುಕೊಂಡಿವೆ. ಇಟೆಲಿ, ಯುರೋಪ್ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಹೈಡ್ರೋಲಿಕ್ ವಿಧಾನವನ್ನು ಇದಕ್ಕಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+