ಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ?

ಹಿಂದೆಂದೂ ನಡೆದಿರದಂಥ ಭೀಕರ ಕಳ್ಳಭಟ್ಟಿ ದುರಂತದಲ್ಲಿ ಭೂಗತದೊರೆಗಳ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಸೋಮವಾರದಿಂದ ಕಳ್ಳಭಟ್ಟಿ ಸೇವಿಸಿದ ಜನ ಸಾಯಲು ಪ್ರಾರಂಭಿಸಿದ್ದಾರೆ. ಶುಕ್ರವಾರ ರಾತ್ರಿಯವರೆಗೆ ಸತ್ತವರ ಸಂಖ್ಯೆ 136ಕ್ಕೇರಿದೆ. 1989ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 132 ಜನ ಸಾವಿಗೀಡಾಗಿದ್ದರು.
ಒಂದೇ ಬಗೆಯ ಕಳ್ಳಭಟ್ಟಿಯನ್ನು ಅಹ್ಮದಾಬಾದ್ ನಲ್ಲಿರುವ ಕಗ್ಡಾಪೀಠ್, ಒಧವ್ ಮತ್ತು ಅಮರೈವಾಡಿ ಪ್ರದೇಶದಲ್ಲಿ ವಿತರಿಸಲಾಗಿತ್ತೆಂದು ತಿಳಿದುಬಂದಿದೆ. ಕಳ್ಳಭಟ್ಟಿ ಸೇವಿಸುತ್ತಿದ್ದಂತೆ ಜನ ಸಾಯಲು ಪ್ರಾರಂಭಿಸಿದ್ದಾರೆ. ಮದ್ಯ ಸೇವಿಸಿರುವ ಸಾಕಷ್ಟು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಳ್ಳಭಟ್ಟಿ ಅಹ್ಮದಾಬಾದ್ ನಲ್ಲಿ ಇನ್ನೂ ವಿತರಣೆಯಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಭೂಗತಲೋಕದ ಕೈವಾಡವಿರುವುದು ಬಹಿರಂಗವಾಗುತ್ತಿದ್ದಂತೆ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆದರೆ, ಈಗಾಗಲೆ ಅನಾಹುತ ಜರುಗಿಹೋಗಿದೆ. ಇದನ್ನು ಅರಿಯದ ಸ್ಲಂನಲ್ಲಿರುವ ಜನ ಕಳ್ಳಭಟ್ಟಿಯನ್ನು ಕೊಳ್ಳುತ್ತಲೇ ಇದ್ದಾರೆ. ಗುರುವಾರ 1200 ಅಕ್ರಮ ಮದ್ಯ ಮಾರಾಟ ಅಂಗಡಿಗಳನ್ನು ಗುಜರಾತ್ ಸರಕಾರ ಮುಚ್ಚಿದೆ ಮತ್ತು 800ಕ್ಕೂ ಹೆಚ್ಚು ಮಾರಾಟಗಾರರನ್ನು ಬಂಧಿಸಿದೆ.
ವಿವಾದ ಸುರಿದುಕೊಂಡ ಮಲ್ಯ : ಮದ್ಯ ಮಾರಾಟವನ್ನು ನಿಷೇಧಿಸಿರುವುದೇ ಗುಜರಾತ್ ನಲ್ಲಿ ಕಳ್ಳಭಟ್ಟಿ ದುರಂತಕ್ಕೆ ಕಾರಣ ಎಂದು ಮದ್ಯದ ದೊರೆ ಯುನೈಟೆಡ್ ಬ್ರಿವರೀಸ್ ನ ಮಾಲಿಕ ವಿಜಯ್ ಮಲ್ಯ ಹೇಳಿ ವಿವಾದವನ್ನು ಮೈಮೇಲೆ ಸುರಿದುಕೊಂಡಿದ್ದಾರೆ.
ಮದ್ಯ ಮಾರಾಟವನ್ನು ನಿಷೇಧಿಸಿರುವುದು ಹಾಸ್ಯಾಸ್ಪದ. ಇದರಿಂದಾಗಿಯೇ ಜನ ಅಕ್ರಮ, ಅನಾರೋಗ್ಯಕರ, ಪ್ರಾಣಕಂಟಕ ಕಳ್ಳಭಟ್ಟಿಯನ್ನು ಸೇವಿಸಲು ಪ್ರಾರಂಭಿಸಿದ್ದಾರೆ ಎಂದು ಮಲ್ಯ ಗುಜರಾತ್ ದುರಂತವನ್ನು ವ್ಯಾಖ್ಯಾನಿಸಿದ್ದಾರೆ. ಮದ್ಯ ನಿಷೇಧವನ್ನು ಹಿಂಪಡೆಯಬೇಕೆಂದು ಮಲ್ಯ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿದ್ದಾರೆ.
ಮಲ್ಯ ಮಾತಿನಿಂದ ಸಿಡಿದೆದ್ದಿರುವ ಬಿಜೆಪಿ, ಗುಜರಾತ್ ನಲ್ಲಿ ಮಲ್ಯ ಅವರ ಬ್ರಾಂಡಿನ ಮದ್ಯ ಮಾರಾಟವಾಗದ ಕಾರಣ ವಿನಾಕಾರಣ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದೆ.
ಮಹಾತ್ಮ ಗಾಂಧಿಯ ಕರ್ಮಭೂಮಿಯಾಗಿದ್ದ ಗುಜರಾತ್ ರಾಜ್ಯವೊಂದರಲ್ಲಿ ಮಾತ್ರ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
(ಏಜೆನ್ಸೀಸ್)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications