ಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ?

ಹಿಂದೆಂದೂ ನಡೆದಿರದಂಥ ಭೀಕರ ಕಳ್ಳಭಟ್ಟಿ ದುರಂತದಲ್ಲಿ ಭೂಗತದೊರೆಗಳ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಸೋಮವಾರದಿಂದ ಕಳ್ಳಭಟ್ಟಿ ಸೇವಿಸಿದ ಜನ ಸಾಯಲು ಪ್ರಾರಂಭಿಸಿದ್ದಾರೆ. ಶುಕ್ರವಾರ ರಾತ್ರಿಯವರೆಗೆ ಸತ್ತವರ ಸಂಖ್ಯೆ 136ಕ್ಕೇರಿದೆ. 1989ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 132 ಜನ ಸಾವಿಗೀಡಾಗಿದ್ದರು.
ಒಂದೇ ಬಗೆಯ ಕಳ್ಳಭಟ್ಟಿಯನ್ನು ಅಹ್ಮದಾಬಾದ್ ನಲ್ಲಿರುವ ಕಗ್ಡಾಪೀಠ್, ಒಧವ್ ಮತ್ತು ಅಮರೈವಾಡಿ ಪ್ರದೇಶದಲ್ಲಿ ವಿತರಿಸಲಾಗಿತ್ತೆಂದು ತಿಳಿದುಬಂದಿದೆ. ಕಳ್ಳಭಟ್ಟಿ ಸೇವಿಸುತ್ತಿದ್ದಂತೆ ಜನ ಸಾಯಲು ಪ್ರಾರಂಭಿಸಿದ್ದಾರೆ. ಮದ್ಯ ಸೇವಿಸಿರುವ ಸಾಕಷ್ಟು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಳ್ಳಭಟ್ಟಿ ಅಹ್ಮದಾಬಾದ್ ನಲ್ಲಿ ಇನ್ನೂ ವಿತರಣೆಯಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಭೂಗತಲೋಕದ ಕೈವಾಡವಿರುವುದು ಬಹಿರಂಗವಾಗುತ್ತಿದ್ದಂತೆ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆದರೆ, ಈಗಾಗಲೆ ಅನಾಹುತ ಜರುಗಿಹೋಗಿದೆ. ಇದನ್ನು ಅರಿಯದ ಸ್ಲಂನಲ್ಲಿರುವ ಜನ ಕಳ್ಳಭಟ್ಟಿಯನ್ನು ಕೊಳ್ಳುತ್ತಲೇ ಇದ್ದಾರೆ. ಗುರುವಾರ 1200 ಅಕ್ರಮ ಮದ್ಯ ಮಾರಾಟ ಅಂಗಡಿಗಳನ್ನು ಗುಜರಾತ್ ಸರಕಾರ ಮುಚ್ಚಿದೆ ಮತ್ತು 800ಕ್ಕೂ ಹೆಚ್ಚು ಮಾರಾಟಗಾರರನ್ನು ಬಂಧಿಸಿದೆ.
ವಿವಾದ ಸುರಿದುಕೊಂಡ ಮಲ್ಯ : ಮದ್ಯ ಮಾರಾಟವನ್ನು ನಿಷೇಧಿಸಿರುವುದೇ ಗುಜರಾತ್ ನಲ್ಲಿ ಕಳ್ಳಭಟ್ಟಿ ದುರಂತಕ್ಕೆ ಕಾರಣ ಎಂದು ಮದ್ಯದ ದೊರೆ ಯುನೈಟೆಡ್ ಬ್ರಿವರೀಸ್ ನ ಮಾಲಿಕ ವಿಜಯ್ ಮಲ್ಯ ಹೇಳಿ ವಿವಾದವನ್ನು ಮೈಮೇಲೆ ಸುರಿದುಕೊಂಡಿದ್ದಾರೆ.
ಮದ್ಯ ಮಾರಾಟವನ್ನು ನಿಷೇಧಿಸಿರುವುದು ಹಾಸ್ಯಾಸ್ಪದ. ಇದರಿಂದಾಗಿಯೇ ಜನ ಅಕ್ರಮ, ಅನಾರೋಗ್ಯಕರ, ಪ್ರಾಣಕಂಟಕ ಕಳ್ಳಭಟ್ಟಿಯನ್ನು ಸೇವಿಸಲು ಪ್ರಾರಂಭಿಸಿದ್ದಾರೆ ಎಂದು ಮಲ್ಯ ಗುಜರಾತ್ ದುರಂತವನ್ನು ವ್ಯಾಖ್ಯಾನಿಸಿದ್ದಾರೆ. ಮದ್ಯ ನಿಷೇಧವನ್ನು ಹಿಂಪಡೆಯಬೇಕೆಂದು ಮಲ್ಯ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿದ್ದಾರೆ.
ಮಲ್ಯ ಮಾತಿನಿಂದ ಸಿಡಿದೆದ್ದಿರುವ ಬಿಜೆಪಿ, ಗುಜರಾತ್ ನಲ್ಲಿ ಮಲ್ಯ ಅವರ ಬ್ರಾಂಡಿನ ಮದ್ಯ ಮಾರಾಟವಾಗದ ಕಾರಣ ವಿನಾಕಾರಣ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದೆ.
ಮಹಾತ್ಮ ಗಾಂಧಿಯ ಕರ್ಮಭೂಮಿಯಾಗಿದ್ದ ಗುಜರಾತ್ ರಾಜ್ಯವೊಂದರಲ್ಲಿ ಮಾತ್ರ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
(ಏಜೆನ್ಸೀಸ್)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications