ಮಲೆನಾಡ ಮಡಿಲಲ್ಲಿ ಮಿನಿ ವಿಧಾನಸೌಧ

ಕಟ್ಟಡ ಸುಮಾರು 35 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣವಾಗುತ್ತಿದ್ದು, ಅಂದಾಜು ವೆಚ್ಚ ಮೊದಲೇ ನಿಗದಿಯಂತೆ ಸುಮಾರು 5.49 ಕೋಟಿ ರೂ. ತಗುಲಲಿದೆ. ಕಟ್ಟಡದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಹಾಗೆಯೇ, ಕಟ್ಟಡದ ಕಾಮಗಾರಿಯು 2007ರ ಡಿಸೆಂಬರ್ನಲ್ಲಿ ಪ್ರಾರಂಭಗೊಂಡು, ಇದೇ ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.
ಮಿನಿ ವಿಧಾನಸೌಧ ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಕೋಟೆ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಹಸಿಲ್ದಾರ್ರವರ ಕಚೇರಿ ಜೊತೆಗೆ ಜಿಲ್ಲಾಧಿಕಾರಿಯವರ ಕಚೇರಿಯೂ ಇದೇ ಸೌಧಕ್ಕೆ ಸ್ಥಳಾಂತಗೊಳ್ಳಲಿದೆ. ಜೊತೆಗೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಉಪಯೋಗ ಪಡೆಯಬಹುದಾಗಿದೆ.
ಸೌಧದಲ್ಲಿ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಲಿವೆ. ಡಿಯುಡಿಸಿ ಇಲಾಖೆ, ಡಿಡಿಎಲ್ಆರ್ ಇಲಾಖೆ ಹಾಗೂ ಇವಿಎಮ್ ಮತ್ತು ಸ್ಟೋರೇಜ್ ಇರುತ್ತವೆ. ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಮತ್ತು ಎಚ್ಕ್ಯು ಕಚೇರಿ ಇರಲಿವೆ. ಹಾಗೆಯೇ ಎರಡನೇ ಮಹಡಿಯಲ್ಲಿ ರೆವೆನ್ಯು ಹೆಡ್ ಅಕೌಂಟೆಂಟ್ ಕಚೇರಿ, ಲೆಕ್ಕ ಪರಿಶೋಧಕರ ಕಚೇರಿ, ಆರ್ಎಚ್ಎಮ್ ಇಲಾಖೆ ಹಾಗೂ ಗಣಕಯಂತ್ರ ವಿಭಾಗ ಮತ್ತು ಭೂಮಿ ಇಲಾಖೆ ಕಾರ್ಯ ನಿರ್ವಹಿಸಲಿವೆ.
ಸೌಧ ನಿರ್ಮಾಣದ ಜವಾಬ್ದಾರಿಯನ್ನು ಬೆಂಗಳೂರಿನ ಜಂಪಾನ ಕನ್ ಸ್ಟ್ರಕ್ಟರ್ ಪ್ರೈ.ಲಿ. ವಹಿಸಿಕೊಂಡಿದೆ. ಕಂಪನಿಯ ಇಂಜಿನಿಯರ್ಗಳಾದ ಪ್ರವೀಣ್ ವರ್ಮ, ಸೋಮಶೇಖರ್ ಮತ್ತು ಎ.ಜಿ.ಎಂ. ನಾರಾಯಣ್ ರಾವ್ ಕಟ್ಟಡ ನಿರ್ಮಾಣದ ಜವಾಬ್ಧಾರಿ ವಹಿಸಿದ್ದಾರೆ. ಸೌಧದ ವಿನ್ಯಾಸವನ್ನು ಸುಜಾತ ಅಂಗಡಿ ರೂಪಿಸಿದ್ದಾರೆ.
ಪರಿಸರ ಪ್ರೇಮಿಗಳ ವಿರೋಧ : ಸೌಧವೇನೋ ನಗರದಲ್ಲಿ ಅದ್ಭುತವಾಗಿ ರೂಪುಗೊಳ್ಳುತ್ತಿದ್ದು ಸಧ್ಯದಲ್ಲಿಯೇ ಅದರ ಉದ್ಘಾಟನೆಯು ನೆರವೇರಲಿದೆ. ಆದರೆ, ಸಮಸ್ಯೆಯೇನೆಂದರೆ ಸೌಧದ ಮುಂಭಾಗದಲ್ಲಿರುವ ಮರಗಳು. ಇಂಜಿನಿಯರ್ಗಳು ಹೇಳುವಂತೆ ಮರಗಳ ಬೇರುಗಳಿಂದ ಕಟ್ಟಡದ ಅಡಿಪಾಯಕ್ಕೆ ಮತ್ತು ಕಟ್ಟಡದ ಬಾಹ್ಯ ಸೌಂದರ್ಯಕ್ಕೆ ಹಾನಿಯಾಗುತ್ತದೆಂಬುದು ಅವರ ಅಭಿಪ್ರಾಯ. ಆದರೆ, ಆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯು ಅನುಮತಿ ನೀಡಿಲ್ಲ. ಜೊತೆಗೆ ಪರಿಸರ ಪ್ರೇಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರ: ಕೆ.ಆರ್. ಸೋಮನಾಥ್
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications