ಎ ಚ್ ಆರ್ ಭಾರದ್ವಾಜ್ ಪ್ರಮಾಣ ಸ್ವೀಕಾರ
ಬೆಂಗಳೂರು, ಜೂ.29:ಈ ಬಾರಿಯ ಕೇಂದ್ರ ಸಚಿವ ಸ್ಥಾನ ವಂಚಿತರಾದ ಕೇಂದ್ರ ಮಾಜಿ ಸಚಿವ ಹನ್ಸ್ ರಾಜ್ ಭಾರದ್ವಾಜ್ ಕರ್ನಾಟಕದ 16 ನೇ ರಾಜ್ಯಪಾಲರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯ ಹೈಕೋರ್ಟ್ ನ ಮುಖ್ಯ ನಾಯಮೂರ್ತಿ ಪಿ ಡಿ ದಿನಕರನ್ ಪ್ರಮಾಣ ವಚನವನ್ನು ಬೋಧಿಸಿದರು. ರಾಜ್ಯಪಾಲರ ಅಧಿಕೃತ ನಿವಾಸ ರಾಜ ಭವನದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ,ಕ್ಯಾಬಿನೆಟ್ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಉಪಸ್ಥಿತಿಯಲ್ಲಿ ಭಾರದ್ವಾಜ್ ಪ್ರಮಾಣ ವಚನ ಸ್ವೀಕರಿಸಿದರು.
ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಭಾರದ್ವಾಜ್ ಅವರನ್ನು ಯಡಿಯೂರಪ್ಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ವಿಧಾನ ಸಭಾಧ್ಯಕ್ಷರು, ವಿಧಾನ ಸಭಾಪತಿ ಹಾಗೂ ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications