ಕೊಡವ ದಿರಿಸಿನಲ್ಲಿ ಲಾಲ್ ಕೃಷ್ಣ ಅಡ್ವಾಣಿ

ಕೊಡವ ಧಿರಿಸನಲ್ಲಿ ಅಪ್ಪಟ ಕೊಡವರಂತೆ ಕಂಡುಬಂದ ಅಡ್ವಾಣಿ ಹಾಗೂ ಅವರ ಪತ್ನಿ ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಈ ಉಡುಗೆಯಲ್ಲೇ ಸ್ವಮ್ಮಿಂಗ್ ಫೂಲ್ ಸುತ್ತಮುತ್ತ ಒಡಾಡಿ ಸಂಭ್ರಮಿಸಿದರು. ಬಳಿಕ ಉಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶುಕ್ರವಾರ ರೆಸಾರ್ಟ್ ಮೂಲಕ ರಾಂಪುರಂ ಕುಟ್ಟಪ್ಪನ್ ಹಾಗೂ ಶೀಲಾ ದಂಪತಿಯೊಂದಿಗೆ ರೆಸಾರ್ಟ್ ನ ರೆಸ್ಟೋರೆಂಟ್ ನಲ್ಲಿ ಬೆಳಗಿನ ಉಪಹಾರ ಸೇವಿಸಿದ ಅಡ್ವಾಣಿ ಹಾಗೂ ಕುಟುಂಬದವರು ಬಳಿಕ ಭೇಟಿಯ ನೆನಪಿಗಾಗಿ ರೆಸಾರ್ಟ್ ಆವರಣದಲ್ಲಿ ಕುಕುಂ ಗಿಡ ನೆಟ್ಟರು.
ರೆಸಾರ್ಟ್ ಗೆ ಭೇಟಿ ನೀಡುವ ಅತಿ ಗಣ್ಯರು ತಮ್ಮ ಭೇಟಿಯ ನೆನಪಿಗಾಗಿ ರೆಸಾರ್ಟ್ ಆವರಣದಲ್ಲಿ ಗಿಡ ನಡುವುದು, ಅದಕ್ಕೆ ಅವರ ಹೆಸರಿಡುವುದು ಇಲ್ಲಿನ ಸಂಪ್ರದಾಯವಾಗಿದ್ದು, ಈಗಾಗಲೇ ರಜನಿಕಾಂತ್, ಮೋಹನ್ ಲಾಲ್, ಮುಮ್ಮುಟ್ಟಿ, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಇಲ್ಲಿ ಗಿಡ ನೆಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications