ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಬೈಯಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಮುಂಬೈ, ಜೂ. 26 : ದೇಶಾದ್ಯಂತ ಮುಂಗಾರು ಮಳೆ ಕೈಕೊಡಲಿದೆ ಎನ್ನುವ ಹಬ್ಬಿರುವ ಬೆನ್ನಲ್ಲೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವ್ಯಾಪಕ ಕ್ರಮ ಕೈಗೊಳ್ಳಲು ಅದಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಮುಂಬೈನ ಪರಿಸ್ಥಿತಿ ಬೇರೆಯಾಗಿದ್ದು, ಇಂದು ಬೆಳಗ್ಗೆ ಶುರುವಾಗಿರುವ ಧಾರಾಕಾರ ಮಳೆ ಎಡಬಿಡದೆ ಸುರಿಯತೊಡಿಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ನಗರದ ಬೈಕುಲಾ, ಮಾಹಿಂ, ಮಹಾಲಕ್ಷ್ಮಿ, ಪಾರೆಲ್, ಗುರುಗಾವ್, ಮಿಲನ್ ಸಬ್ ವೇ, ಬನದೀಪ್, ಕುರ್ಲಾ ಮತ್ತು ಮುಳಂದ ಪ್ರದೇಶಗಳು ನೀರಿನಿಂದ ಆವೃತವಾಗಿವೆ. ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ವಾಹನಗಳು ಚಲಿಸುವುದು ಕಷ್ಟಸಾಧ್ಯವಾಗಿದೆ. ಮಳೆಯಲ್ಲಿಯೇ ವೇಗವಾಗಿ ವಾಹನ ಚಾಲನೆ ಪರಿಣಾಮ ಹಾಲಿನ ವಾಹನವೊಂದು ಪಲ್ಟಿ ಹೊಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ವಿಲೇ ಪಾರ್ಲೆ ಬಳಿ ನಡೆದಿದೆ. ಮಹಾರಾಷ್ಟ್ರ ಮಹಾನಗರ ಪಾಲಿಕೆ ಚರಂಡಿ ನೀರು ಸುಗಮಗೊಳಿಸಲು ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ.
(ಏಜನ್ಸೀಸ್)
Comments
Story first published: Friday, June 26, 2009, 18:04 [IST]