Get Updates
Get notified of breaking news, exclusive insights, and must-see stories!

ಕ್ರಿಶ್ಚಿಯನ್ನರೆ ನಮ್ಮನ್ನು ಮನ್ನಿಸಿ : ಚಿದಂಬರಂ

P Chidambaram
ಕಂದಮಾಲ್ (ಒರಿಸ್ಸಾ), ಜೂ. 26 : ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹತ್ಯೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ನಡೆಸಿದ ಕೋಮು ದಲ್ಲುರಿಯಲ್ಲಿ ದಾಳಿಗೊಳಿಗಾದ ಕ್ರಿಶ್ಚಿಯನ್ ಸಮುದಾಯಕ್ಕೆ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಕ್ಷಮೆಯಾಚಿಸಿದ್ದಾರೆ. ಈ ಘಟನೆಯೊಂದು ದುರದೃಷ್ಟಕರ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಭೇಟಿಗೆ ಒರಿಸ್ಸಾ ಪ್ರವಾಸ ಕೈಗೊಂಡಿರುವ ಚಿದಂಬರಂ ಇಂದು ಕೋಮುಗಲಭೆಗೆ ಒಳಗಾಗಿದ್ದ ಕಂದಮಾಲ್ ಮತ್ತು ಪುಲ್ಬನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಘಟನೆಗೆ ಹೆದರಿ ಜೀವ ಭಯದಿಂದ ಗ್ರಾಮಗಳನ್ನು ತೊರೆದಿರುವ ಎಲ್ಲ ಕ್ರಿಶ್ಚಿಯನ್ ರು ಮರಳಿ ಸ್ವಗ್ರಾಮಗಳಿಗೆ ಆಗಮಿಸಬೇಕು. ಅದಕ್ಕೆ ಬೇಕಿರುವ ಸಕಲ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಲಿದೆ. ಘಟನೆ ಸಂಬಂಧಿಸಿದಂತೆ ನಮಗೆ ಕೂಡಾ ತುಂಬಾ ನೋವಾಗಿದೆ. ನಮ್ಮ ತಪ್ಪಾಗಿದ್ದರೆ ಮನ್ನಿಸಿ, ನಿಮಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು ಎಂದು ಅವರು ವಿವರಿಸಿದ್ದಾರೆ.

ಘಟನೆಯಲ್ಲಿ ತಪ್ಪೆಸಗಿರುವ ಆರೋಪಿಗಳಿಗೆ ಖಂಡಿತವಾಗಿಯೂ ಶಿಕ್ಷೆ ಆಗಲಿದೆ. ಕಾನೂನು ಕೈಗೆ ತೆಗೆದುಕೊಂಡಿರುವವರು ಯಾರೇ ಆದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಚಿದು, ನಿಮ್ಮಲ್ಲಿ ವಿಶ್ವಾಸ ಭಾವನೆ ಮೂಡಿಸುವುದು. ನಿಮ್ಮ ಸುರಕ್ಷಿತ ಕಾಪಾಡುವುದು ನಮ್ಮ ಹೊಣೆಗಾರಿಕೆ. ಅದರಿಂದ ನಾವು ಪಲಾಯನ ಮಾಡುವುದಿಲ್ಲ ಎಂದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಮಾವೋವಾದಿಗಳು ಹತ್ಯೆಗೈದಿದ್ದರು. ಇದರಿಂದ ರೊಚ್ಚಿಗೆದ್ದ ವಿಎಚ್ ಪಿ ಕಾರ್ಯಕರ್ತರು ಕ್ರಿಶ್ಚಿಯನ್ನರೆ ಹತ್ಯೆಗೆ ಕಾರಣ ಎಂದು ಕ್ರಿಶ್ಚಿಯನ್ನರಿಗೆ ಸಂಬಂಧಿಸಿದ ಚರ್ಚ್ ಗಳನ್ನು ಒಡೆದು ಹಾಕಿದ್ದರು. ಘಟನೆಯಲ್ಲಿ 38 ಮಂದಿ ಸಾವನ್ನಪ್ಪಿದ್ದರು. ಕಂದಮಾಲ್ ನ ಚರ್ಚ್ ನಲ್ಲಿದ್ದ ಸಿಸ್ಟರ್ ವೊಬ್ಬರನ್ನು ಜೀವಂತ ದಹನ ಮಾಡಿದ ಪೈಶಾಚಿಕೆ ಪ್ರಸಂಗ ನಡೆದು ಹೋಗಿತ್ತು. ಒಂದು ವಾರಗಳ ಕಾಲ ಒರಿಸ್ಸಾದ ಕಂದಮಾಲ್ ಹಾಗೂ ಪುಲ್ಬನಿ ನಗರಗಳಲ್ಲಿ ಅಕ್ಷರಶಃ ಮಾರಣಹೋಮದ ಕೇಂದ್ರಗಳಾದ ಪರಿವರ್ತನೆಯಾಗಿದ್ದವು. ಅನೇಕ ಕ್ರಿಶ್ಚಿಯರು ಜೀವ ಭಯದಿಂದ ಇತರೆ ರಾಜ್ಯಗಳಿಗೆ ಪಲಾಯನ ಮಾಡಿದ್ದರು.

(ಏಜನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+