ಇನ್ಫೋಸಿಸ್ ಆಡಳಿತ ಮಂಡಳಿಗೆ ನಿಲೇಕಣಿ ರಾಜೀನಾಮೆ
ಗುರುವಾರ ಕೇಂದ್ರದ ಸರಕಾರ ಗುರುತಿನ ಚೀಟಿ ವಿತರಣೆ ಯೋಜನೆಗೆ ನಿಲೇಕಣಿಯವರನ್ನು ಚೇರಮನ್ ರಾಗಿ ಅಧಿಕೃತ ಆದೇಶ ಹೊರಡಿಸಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಂದನ್ ನಿಲೇಕಣಿ ಅವರಿಗೆ ಅಧಿಕಾರ ವಹಿಸಿಕೊಳ್ಳುವಂತೆ ಅಹ್ವಾನಿಸಿದ್ದಾರೆ. ಗುರುತಿನ ಚೀಟಿ ವಿತರಣೆಯ ಚೇರಮನ್ ಹುದ್ದೆ ಕೇಂದ್ರ ಸಂಪುಟ ದರ್ಜೆಯ ಸಚಿವ ಸ್ಥಾನಮಾನಕ್ಕೆ ಸಮಾನಾಗಿದೆ.
ಸರಕಾರ ನೀಡಿರುವ ಹುದ್ದೆಯನ್ನು ಸ್ವೀಕರಿಸಿರುವ ನಿಲೇಕಣಿ ಮಾತೃಸಂಸ್ಥೆ ಇನ್ಫೋಸಿಸ್ ನ ಸಹಸಂಸ್ಥಾಪಕ ಹಾಗೂ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ರಾಷ್ಟ್ರೀಯ ಗುರುತಿನ ವಿತರಣೆ ಯೋಜನೆಗೆ ನಿಲೇಕಣಿ ಅವರನ್ನು ಮುಖ್ಯಸ್ಥರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಂತರ ಬಜೆಟ್ ನಲ್ಲಿ ಯುಪಿಎ ಈ ಯೋಜನೆ ಪ್ರಕಟಿಸಿ ಆರಂಭಿಕ 100 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿತ್ತು. ನಂತರ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಈ ಯೋಜನೆ ಸೇರಿಸಿಕೊಂಡಿತ್ತು. ಸರಕಾರ ರಚನೆ ಸಂದರ್ಭದಲ್ಲೇ ನಿಲೇಕಣಿ ಅವರನ್ನು ಯೋಜನಾ ಆಯೋಗದ ಸದಸ್ಯರನ್ನಾಗಿಸಲು ಪ್ರಧಾನಿ ಸಿಂಗ್ ಒಲವು ತೋರಿಸಿದ್ದರು. ಆದರೆ, ಆದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಪ್ರಧಾನಿ ಸಿಂಗ್ ಅವರ ಆಸೆ ಕೈಗೊಡಿದೆ.
(ದಟ್ಸ್ ಕನ್ನಡ ವಾರ್ತೆ)