ಭಾರತದಲ್ಲಿ ಬರಗಾಲದ ಬಿಸಿ ತಟ್ಟಲಿದೆ
ನವದೆಹಲಿ, ಜೂ. 24 : ಈ ವರ್ಷ ದೇಶಾದ್ಯಂತ ಬರದ ಭೂತ ಕಾಲಿಡಲಿದೆಯೇ ? ಮುಂಗಾರು ಮಳೆಯ ಲಕ್ಷಣ ಅವಲೋಕಿಸಿದರೆ ಈ ರೀತಿ ಭೀತಿ ಕಾಡುತ್ತಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ನಾನಾ ಸಮಿತಿಗಳ ಕಾರ್ಯದರ್ಶಿಗಳೊಡನೆ ಸಭೆ ನಡೆಸಿ ಚರ್ಚಿಸುವಂತೆ ಸಂಪುಟ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಇದರ ಜೊತೆಗೆ ದೆಹಲಿಯಲ್ಲಿ ಶುಕ್ರವಾರ ಮಳೆ ಕೊರತೆ ಅನುಭವಿಸುತ್ತಿರುವ ರಾಜ್ಯಗಳ ಕೃಷಿ ಕಾರ್ಯದರ್ಶಿಗಳ ಸಭೆಯನ್ನು ಆಯೋಜಿಸಲಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ವಿಳಂಬ ಹಾಗೂ ಕೊರತೆ ಕೇಂದ್ರ ಸರಕಾರವನ್ನು ಚಿಂತೆಗೀಡು ಮಾಡಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಪೃಥ್ವಿರಾಜ್ ಚೌಹಾಣ್ ಈ ಸಂಬಂಧ ಹವಾಮಾನ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಚರ್ಚೆ ನಡೆಸಲಿದ್ದಾರೆ.
ಜಾಗತಿಕ ಹವಾಮಾನ ಸಂಘಟನೆಯ ಪ್ರಕಾರ ಎಲ್ ನಿನೊ ಇದಕ್ಕೆಲ್ಲ ಕಾರಣ. ಮಳೆ ಬಾರದೇ ಬರಗಾಲಕ್ಕೆ ಕಾರಣವಾಗಿರುವ ವರ್ಷವನ್ನು ನಿನೊ ವರ್ಷ ಎನ್ನುತ್ತಾರೆ. ಈ ವರ್ಷವೂ ಇಂತಹ ಅಪಾಯ ಕಾದಿದೆ ಎಂದು ಹವಾಮಾನ ಸಂಘಟನೆ ಎಚ್ಚರಿಕೆ ನೀಡಿದೆ. ಎಲ್ ನಿನೊ ಅಂದರೆ, ಕಾಲಕಾಲಕ್ಕೆ ಹವಾಮಾನದಲ್ಲಿ ಕಂಡು ಬರುವ ವೈಪರಿತ್ಯ. ಅಂತಹ ಸಂದರ್ಭದಲ್ಲಿ ಫೆಸಿಫಿಕ್ ಸಾಗರದ ಮೇಲಿನ ನೀರಿನ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರುತ್ತದೆ.
(ಏಜನ್ಸೀಸ್)












Click it and Unblock the Notifications