ಕ್ರಿಯಾಶೀಲ ಯುವಪೀಳಿಗೆಗೊಂದು ಹೊಸ ಸ್ಪರ್ಧೆ
ಬೆಂಗಳೂರು, ಜೂ. 24: ನಾವು ಬಾಳುತ್ತಿರುವ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂದು ಹಾತೊರೆಯುತ್ತಿರುವ ಯುವ ಜನಾಂಗಕ್ಕೆ ಇಲ್ಲಿದೆ ಸೃಜನಶೀಲ ಅವಕಾಶ. ಯುವಕ/ತಿಯರು ತಮ್ಮಿಷ್ಟದ ಕ್ಷೇತ್ರಗಳಲ್ಲಿ ಸಮಾಜಿಕ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಪುರಸ್ಕೃತರಾಗಬಹುದು.
ಅರ್ಥಪೂರ್ಣ ಸಮಾಜ ಸೇವಕರನ್ನು ಗುರುತಿಸಿ, ಗೌರವಿಸುತ್ತಾ ಬಂದಿರುವ ಬೆಂಗಳೂರಿನ ಸಮಾಜ ಸೇವಕರ ಸಮಿತಿ ತನ್ನ ವಾರ್ಷಿಕೋತ್ಸವವನ್ನು ಸಮಾಜ ಸೇವಕರ ದಿನಾಚರಣೆ ಎಂದು ಘೋಷಿಸಿ ಆಚರಿಸುತ್ತಾ ಬಂದಿದೆ.ಆಗಸ್ಟ್-1ರಂದು ಏಳನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಾಮಾಜಿಕ ಅಭಿವೃದ್ಧಿಯ ಚಟುವಟಿಕೆ ಆಯೋಜನಾ ಸ್ಪರ್ಧೆಯನ್ನು ಶಿಕ್ಷಣ,ಪರಿಸರ,ಸಾಹಿತ್ಯ,ಕಲೆ,ಸಂಗೀತ ಮತ್ತು ಕ್ರೀಡೆ ಈ ಕ್ಷೇತ್ರಗಳಲ್ಲಿ ಏರ್ಪಡಿಸಿದೆ.
ಕೇವಲ 15 ದಿನಗಳಲ್ಲಿ,ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯರೂಪುಗೊಂಡು ಯಶಸ್ವಿಯಾದ 5 ಅತ್ಯುತ್ತಮ ಕಾರ್ಯಚಟುವಟಿಕೆಗಳಿಗೆ ಆಗ ಸ್ಟ್ 1 ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುತ್ತದೆ.ಆಸಕ್ತ ವ್ಯಕ್ತಿಗಳು/ಸಂಸ್ಥೆಗಳು ತಮ್ಮ ಸ್ವವಿವರಗಳೊಂದಿಗೆ ಸಮಿತಿಯನ್ನು ಸಂಪರ್ಕಿಸಬಹುದು.
1.ಶಿಕ್ಷಣ ಕ್ಷೇತ್ರ
2. ಪರಿಸರ ನೈರ್ಮಲ್ಯ ಮತ್ತು ಸಂರಕ್ಷಣೆ
3. ಸಾಹಿತ್ಯ, ಸಂಗೀತ, ಚಿತ್ರಕಲೆ.
4. ಕ್ರೀಡೆ.
ನಿಯಮಗಳು:
1. ಭಾಗವಹಿಸುವ ವ್ಯಕ್ತಿ/ಸಂಸ್ಥೆಯು ಅತ್ಯಂತ ಕಡಿಮೆ ಖರ್ಚಿನಲ್ಲಿ ತಮ್ಮ ಕಾರ್ಯ ಯೋಜನೆಯನ್ನು ಪೂರ್ಣಗೊಳಿಸಬೇಕು. ಗರಿಷ್ಠ ಖರ್ಚು ರು1000 ಮಾತ್ರ ಮಾಡಿರಬೇಕು.
2. ಕೇವಲ ಹದಿನೈದು ದಿವಸಗಳೊಳಗಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರಬೇಕು.
3. ಮೇಲ್ಕಂಡ ನಿಬಂಧನೆಗಳಿಗೆ ಬದ್ಧರಾಗಿರುವ ಸಾಕ್ಷಿಗಾಗಿ ಪುರಾವೆಗಳನ್ನು(ಛಾಯಾಚಿತ್ರ,ರಸಿತಿಗಳು) ಹೊಂದಿರಬೇಕು.
4. ಸಮಾಜ ಸೇವಕರ ಸಮಿತಿಯು 5 ಉತ್ತಮ ಯೋಜನೆಗಳನ್ನು ಗುರುತಿಸಿ ಬಹುಮಾನವನ್ನು ನಿರ್ಧರಿಸುತ್ತದೆ. ಗರಿಷ್ಠ ಖರ್ಚು ಮಾಡಿರುವ ಮೊಬಲಗನ್ನು ಈ ಐದು ಬಹುಮಾನ ವಿಜೇತರಿಗೆ ಮಾತ್ರ ಹಿಂತಿರುಗಿಸಲಾಗುತ್ತದೆ. ಸಮಿತಿಯ ನಿರ್ಧಾರವೇ ಅಂತಿಮ.
5.ಪೂರ್ಣಗೊಂಡ ಯೋಜನೆಯ ವಿವರಗಳನ್ನು ಸಮಿತಿಗೆ ಸಲ್ಲಿಸುವ ಕಡೆಯ ದಿನಾಂಕ 15-ಜುಲೈ2009
6. ಬಹುಮಾನಗಳನ್ನು ಆಗಸ್ಟ್ -1 ರಂದು ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು.
7. ಈ ಸ್ಪರ್ಧೆಗೆ ಯಾವುದೇ ಪ್ರವೇಶ ಧನ ಇರುವುದಿಲ್ಲ.
ಸೂಚನೆ: ಅತ್ಯಂತ ಕಡಿಮೆ ಹಣ ಬಳಸಿ ಸೃಜನಶೀಲವಾಗಿ ಅಭಿವೃದ್ಧಿ ಕಾರ್ಯ ಎಂದು ತೋರಿಸುವ ಕ್ರಿಯಾಶೀಲರಿಗೆ ಆದ್ಯತೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ರಾಜಕುಮಾರ್ :9448171069
ರಾಘವೇಂದ್ರ :98866 83008
ಅಂಚೆ ವಿಳಾಸ:
ಸಮಾಜ ಸೇವಕರ ಸಮಿತಿ
171, ಸುಬ್ಬರಾಮ ಚೆಟ್ಟಿ ರಸ್ತೆ,
ನೆಟ್ಟಕಲ್ಲಪ್ಪ ಬಸ್ ನಿಲ್ದಾಣದ ಹಿಂಭಾಗ,
ಬಸವನಗುಡಿ, ಬೆಂಗಳೂರು - 560004
ಈ-ಮೇಲ್ ವಿಳಾಸ : [email protected]
(ದಟ್ಸ್ ಕನ್ನಡ ವಾರ್ತೆ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications