ಜೂನ್ 27 ರಂದು ಪಿಬಿಎಸ್ ರಸಸಂಜೆ
ಬೆಂಗಳೂರು,
ಜೂ. 23 : 'ನಾ ಕಂಡ ಬೆಂಗಳೂರು' ವಾರಪತ್ರಿಕೆಯು ಜೂನ್ 27 (ಶನಿವಾರ) ರಂದು ನಗರದ ಬಸವನಗುಡಿ ಕೋಹಿನೂರ್ ಆಟದ ಮೈದಾನದಲ್ಲಿ ಖ್ಯಾತ ಗಾಯಕ ಪಿ ಬಿ ಶ್ರೀನಿವಾಸ್ ಅವರ ರಸಸಂಜೆ ಕಾರ್ಯಕ್ರಮ ಆಯೋಜಿಸಿದೆ. ಸ೦ಜೆ 6.30 ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಪಿಬಿಎಸ್ ಹಾಡಿದ 60 ರಿ೦ದ 70ರ ದಶಕದಲ್ಲಿ ತೆರೆಕಂಡ ಹಳೆಯ ಚಿತ್ರಗೀತೆಗಳನ್ನು ಖ್ಯಾತ ಗಾಯಕ, ಗಾಯಕಿಯರು ಹಾಡುವ ಮೂಲಕ ಸಭಿಕರನ್ನು ಮನರಂಜಿಸಲಿದ್ದಾರೆಂದು ಪತ್ರಿಕೆ ಸಂಪಾದಕ ಅನಿಲ್ ಕುಮಾರ್ ತಿಳಿಸಿದ್ದಾರೆ. id="toptextpromo">ಗಾಯಕರಾದ
ರಮೇಶ್ ಚಂದ್ರ, ಪಂಚಮ ಹಳಿಬಂಡಿ, ಗಣೇಶ್ ಪ್ರಸಾದ್, ದಿವ್ಯಾ ರಾಘವನ್ ಮುಂತಾದವರು ಈ ರಸಸಂಜೆ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಇಂದಿನ ಯುವ ಪೀಳಿಗೆಗೆ ಹಳೆಯ ಹಾಡಿನ ಪರಿಕಲ್ಪನೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಈ ರಸಸಂಜೆ ಕಾರ್ಯಕ್ರಮದಲ್ಲಿ ಸಚಿವ ಅರವಿಂದ ಲಿಂಬಾವಳಿ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅನಿಲ್ ಕುಮಾರ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications