ರೆಡ್ಡಿಗಳಿಂದ 60 ಲಕ್ಷ. ರು ಕವಚ ಕಾಣಿಕೆ
ಬಳ್ಳಾರಿ, ಜೂ. 23 : ಕಂದಾಯ ಸಚಿವ ಜಿ ಕರುಣಾಕರ ರೆಡ್ಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಶ್ರೀ ಕಾಳಹಸ್ತಿ ದೇವಾಲಯಕ್ಕೆ ಸುಮಾರು 60 ಲಕ್ಷ ರುಪಾಯಿ ಮೌಲ್ಯದ ವಜ್ರ, ಚಿನ್ನ ಹಾಗೂ ನವರತ್ನಗಳನ್ನು ಹೊಂದಿರುವ ಕವಚವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ತಮ್ಮ ಜನ್ಮಸ್ಥಳವಾದ ಕಾಳಹಸ್ತಿಗೆ ತೆರಳಿದ ರೆಡ್ಡಿ, ವಿಶೇಷ ಪೂಜೆ ನೆರವೇರಿಸಿ ಕಾಣಿಕೆ ಸಮರ್ಪಿಸಿದ್ದಾರೆ. ಕಳೆದ ಜೂನ್ 11 ರಂದು ರೆಡ್ಡಿ ಗಣಿಧಣಿಗಳು ತಿರುಪತಿ ತಿಮ್ಮಪ್ಪನಿಗೆ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟ ಸಮರ್ಪಿಸಿದ್ದರು. ಅಷ್ಟೇ ಅಲ್ಲದೆ ರೆಡ್ಡಿ ಸಹೋದರರು ತಮ್ಮ ಆರಾಧ್ಯದೈವ ಆಂಧ್ರಪ್ರದೇಶದ ಕಸಾಪುರದ ಆಂಜನೇಯ ದೇಗುಲಕ್ಕೆ ಭರ್ಜರಿ ಕಾಣಿಕೆಯೊಂದನ್ನು ನೀಡಲಿದ್ದಾರೆಂದು ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications