ಸೂರತ್ : ಫೋನ್ ಕದ್ದಾಲಿಕೆ ಈಗ ಪೊಲೀಸರ ಸರದಿ
ಅಹಮದಾಬಾದ್, ಜೂ. 18 : ವಿಶ್ವಹಿಂದೂ ಪರಿಷತ್ ಮತ್ತು ಆರ್ಎಸ್ಎಸ್ ನಾಯಕರ ದೂರವಾಣಿಯನ್ನು ಪೊಲೀಸರು ಕದ್ದಾಲಿಸುತ್ತಿದ್ದಾರೆಂದು ವಿಎಚ್ ಪಿ ನಾಯಕ ದಿನೇಶ್ ನವಾಡಿಯಾ ಆರೋಪಿಸಿದ್ದಾರೆ. ವಿಎಚ್ ಪಿ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯ ಸೇರಿದಂತೆ ಹಲವು ನಾಯಕರ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂದು ಇವರು ಆರೋಪಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಮುಸ್ಲಿಂ ಯುವಕರ ತಂಡ ಅತ್ಯಾಚಾರ ನಡೆಸಿದ್ದನ್ನು ವಿರೋಧಿಸಿ ಸೂರತ್ ಬಂದ್ ಗೆ ಕರೆನೀಡಲಾಗಿತ್ತು. ಈ ವೇಳೆ ನಮ್ಮ ನಾಯಕರನ್ನೇ ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ನಾಯಕರುಗಳ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದ್ದು, ಗೃಹ ಇಲಾಖೆ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ. ಸಮಾಜದ ಸ್ವಾಥ್ಯ ಕಾಪಾಡಲು ಕೆಲವರ ಚಲನವಲನಗಳ ಮೇಲೆ ನಿಗಾ ಇಟ್ಟಿರುವುದನ್ನು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications