ಕಾನೂನು ಪ್ರವೇಶ ಪರೀಕ್ಷೆಯಲ್ಲಿ ಅಂಶುಲಾ 18ನೇ ರ್ಯಾಂಕ್

ಹೈದರಾಬಾದ್ ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯ ನಡೆಸಿದ ಈ ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕದಿಂದ ಪರೀಕ್ಷೆಗೆ ಕುಳಿತಿದ್ದ ವಿದ್ಯಾರ್ಥಿಗಳಲ್ಲಿ ಅಂಶುಲಾ ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 200 ಅಂಕಗಳಲ್ಲಿ ಅಂಶುಲಾ ಪ್ರಕಾಶ್ ಪಡೆದದ್ದು 169 ಅಂಕಗಳು. ಅತಿ ಹೆಚ್ಚು ಅಂದರೆ 175 ಅಂಕ ಗಳಿಸಿರುವ ನಿಧಿ ಮೋದಾನಿ, ರಜತ್ ಗಂಗ್ವಾರ್ ಮತ್ತು ಸಿದ್ಧಾರ್ಥ ಬಸು ಪ್ರಥಮ ಸ್ಥಾನ ಗಳಿಸಿದ್ದಾರೆ. ಕಳೆದ ವರ್ಷ 158 ಅಂಕ ಗಳಿಸಿದ ವಿದ್ಯಾರ್ಥಿ ಪ್ರಥಮ ರ್ಯಾಂಕ್ ಗಳಿಸಿದ್ದರು.
ಬೆಂಗಳೂರಿನ ಕೋಣನಕುಂಟೆ ನಿವಾಸಿಯಾಗಿರುವ ಅಂಶುಲಾ ಪ್ರಕಾಶ್ ಅವರಿಗೆ ಕಾಮನ್ ಲಾ ಅಡ್ಮಿಷನ್ ಟೆಸ್ಟ್ (CLAT 2009) ನಲ್ಲಿ ಇದು ಎರಡನೇ ಪ್ರಯತ್ನ. ಕಳೆದ ವರ್ಷ ಅವರು 200ನೇ ರ್ಯಾಂಕ್ ಗಳಿಸಿದ್ದರು. ಇದರಿಂದ ತೃಪ್ತರಾಗದ ಅಂಶುಲಾ ಎರಡನೇ ಪ್ರಯತ್ನದಲ್ಲಿ 18ನೇ ರ್ಯಾಂಕ್ ಗಳಿಸಿದ್ದಾರೆ.
ಇಡೀ ರಾಷ್ಟ್ರದಲ್ಲಿರುವ 11 ನ್ಯಾಷನಲ್ ಕಾನೂನು ಕಾಲೇಜುಗಳಲ್ಲಿ ಅತ್ಯುತ್ತಮ ಕಾನೂನು ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಲಾನಲ್ಲಿ ಐದು ವರ್ಷಗಳ ಅಧ್ಯಯನವನ್ನು ನಡೆಸುವ ಇಚ್ಛೆಯಿದೆ ಎಂದು ಅಂಶುಲಾ ದಟ್ಸ್ ಕನ್ನಡಕ್ಕೆ ತಿಳಿಸಿದರು. ಇದಕ್ಕಾಗಿ ಅಹ್ಮದಾಬಾದ್ ನಲ್ಲಿ ತರಬೇತಿ ಪಡೆದಿರುವ ಅಂಶುಲಾ ಬೆಂಗಳೂರಿಗೆ ಮರಳುವ ಉತ್ಸಾಹದಲ್ಲಿದ್ದಾರೆ.
ಕಳೆದ ವರ್ಷ ಈ ಪ್ರವೇಶ ಪರೀಕ್ಷೆಯನ್ನು ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಲಾ ಆಯೋಜಿಸಿತ್ತು. ಈ ಬಾರಿ ಪರೀಕ್ಷೆ ತುಂಬ ಸರಳವಾಗಿತ್ತು. ಸತತ ಪ್ರಯತ್ನ, ತಂದೆ-ತಾಯಿಯರ ಆಶೀರ್ವಾದ, ನ್ಯಾಷನಲ್ ಲಾ ಸ್ಕೂಲ್ ಸ್ನೇಹಿತರ ಪ್ರೋತ್ಸಾಹ ಒಳ್ಳೆಯ ಅಂಕ ಗಳಿಸಲು ಸಹಕಾರಿಯಾಯಿತು ಎಂದು ಅಂಶುಲಾ ತಿಳಿಸಿದರು.
ಹನ್ನೊಂದು ನ್ಯಾಷನಲ್ ಕಾನೂನು ಕಾಲೇಜುಗಳಲ್ಲಿ ಇರುವ ಸೀಟುಗಳು 1000 ಮಾತ್ರ. ಎಂಬಿಬಿಎಸ್ ಗೆ ಸರಿಸಮಾನ ಎಂದು ಪರಿಗಣಿಸಲಾಗುವ ನ್ಯಾಷನಲ್ ಕಾನೂನು ಪದವೀಧರರಿಗೆ ಕಾನೂನು ಕ್ಷೇತ್ರದಲ್ಲಿ ಭಾರೀ ಬೇಡಿಕೆಯಿದೆ. ಹಾಗೆಯೇ, ಶುಲ್ಕ ಕೂಡ ಅಷ್ಟೇ ದುಬಾರಿಯಾಗಿದೆ. ಈ ಸೀಟುಗಳಿಗಾಗಿ ಸ್ಪರ್ಧೆಯೂ ಅತ್ಯಂತ ತುರುಸಿನಿಂದ ಕೂಡಿರುತ್ತದೆ. ಈ ಬಾರಿ ಒಟ್ಟು 14,272 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 13,595 ಪದವಿಪೂರ್ವ ವಿದ್ಯಾರ್ಥಿಗಳು ಮತ್ತು 677 ಸ್ನಾತಕೋತ್ತರ ವಿದ್ಯಾರ್ಥಿಗಳು.
ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸುಗಳನ್ನು ಕಟ್ಟಿಕೊಂಡಿರುವ ಮಧ್ಯಮ ವರ್ಗದ ಹುಡುಗಿ ಅಂಶುಲಾ ಪ್ರಕಾಶ್ ಅವರಿಗೆ ಅಭಿನಂದನೆ ಸಲ್ಲಿಸಲು ಮತ್ತು ಪ್ರೋತ್ಸಾಹ ನೀಡಲು 99167 28212 ಸಂಖ್ಯೆಗೆ ಕರೆ ಮಾಡಬಹುದು.
ಅಂಶುಲಾ ಪ್ರಕಾಶ್ ಈಮೇಲ್ ವಿಳಾಸ : [email protected]
(ದಟ್ಸ್ ಕನ್ನಡ ವಾರ್ತೆ)
-
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
Karnataka Rain: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ: ಐಎಂಡಿ ವರದಿ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
SSLC ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್: ಸರ್ಕಾರದ ದಿಢೀರ್ ನಿರ್ಧಾರಕ್ಕೆ ಖಾಸಗಿ ಶಾಲೆಗಳ ತೀವ್ರ ವಿರೋಧ -
ರಾಜ್ಯದಲ್ಲಿ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ', ಆದರೆ ಕೇಂದ್ರದಿಂದ ಕಡ್ಡಾಯದ ಹೊಸ ಆದೇಶ : ರಾಜೀವ ಹೆಗಡೆ ಬರಹ -
RCB Vs CSK ಮ್ಯಾಚ್ ನೋಡಲು ಬರೋಬ್ಬರಿ 1.46 ಲಕ್ಷ ಕಳೆದುಕೊಂಡ ಕಳೆದುಕೊಂಡ ಟೆಕ್ಕಿ, ಐಪಿಎಲ್ ಅಭಿಮಾನಿಗಳೇ ಹುಷಾರ್ -
April 6 Horoscope: ಈ ರಾಶಿಗಳಿಗೆ ಲಾಭ, ಕೆಲವರಿಗೆ ಎಚ್ಚರಿಕೆ ಸೂಚನೆ -
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ












Click it and Unblock the Notifications