ನಾನು ಇನ್ನು ಮೇಲೆ ಚಳವಳಿ ಮಾಡುವುದಿಲ್ಲ

ಭಾನುವಾರದಂದು ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾನು ಬಂಗಾರಪ್ಪ. ಇಂತಹ ಸೋಲುಗಳಿಗೆಲ್ಲಾ ತಲೆಬಾಗುವವನಲ್ಲ. ಸೋಲಿನಿಂದ ಬೇಸರವಾಗಿ ರಾಜಕಾರಣ ಬಿಡುವ ಬಂಗಾರಪ್ಪ ನಾನಲ್ಲ. ನನ್ನ ಹೋರಾಟ ಹಾಗೂ ರಾಜಕಾರಣ ಕೊನೆಯವರೆಗೂ ಇರುತ್ತದೆ ಎಂದು ವಿವರಿಸಿದರು.
ನಾನು ಸೋತಿದ್ದು ಅತೀ ಆತ್ಮವಿಶ್ವಾಸದಿಂದ ಎಂದು ಹೇಳುವುದು ಸರಿಯಲ್ಲ. ಎಲ್ಲರೂ ಈ ಚುನಾವಣೆಯನ್ನು ಗಮನಿಸಿದ್ದಾರೆ. ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿದಿದ್ದರಿಂದ ನಾನು ಸೋಲಬೇಕಾಯಿತು. ನಾನು ಚಳವಳಿ ಮಾಡುತ್ತಾ ಕುಳಿತುಕೊಂಡರೆ ಜನ ಹಣ, ಹೆಂಡ ಪಡೆದು ನನ್ನನ್ನು ಸೋಲಿಸುತ್ತಲೇ ಇರುತ್ತಾರೆ. ಜನ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಾವೇ ಚಳವಳಿ ಮಾಡಲು ಸಿದ್ಧರಾಗಲಿ. ಅಲ್ಲಿಯವರೆಗೆ ನಾನೂ ಚಳವಳಿ ಮಾಡುವುದಿಲ್ಲ ಎಂದು ತಮ್ಮ ಸೋಲನ್ನು ವಿಶ್ಲೇಷಿಸಿಕೊಂಡರು.
ನನ್ನ ರಾಜಕಾರಣದ ಬದುಕಿನಲ್ಲಿ ಯಾರಿಗೂ ಮೋಸ ಮಾಡಿದವನಲ್ಲ. ನಾನು ಪದವಿಗಳಲ್ಲಿದ್ದ ಸಂದರ್ಭಗಳಲ್ಲಿ ನನ್ನ ದೂರವಾಣಿ ಯಾವತ್ತೂ ಸಮಸ್ಯೆಗಳನ್ನು ಸ್ವೀಕರಿಸಲು ಸಿದ್ಧವಿರುತ್ತಿತ್ತು. ಆ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿರುತ್ತಿದ್ದೆ. ಜನರು ಈಗ ಬದಲಾದಂತಿದ್ದಾರೆ. ಚುನಾವಣೆಯ ಸಂದರ್ಭಗಳಲ್ಲಿ ಹಣ, ಹೆಂಡ ಪಡೆದು ಮತ ಚಲಾಯಿಸುವ ಮಟ್ಟಕ್ಕೆ ವಾತಾವರಣವಿದೆ. ಇದು ಸಾಕಷ್ಟು ಬೇಸರದ ವಿಷಯ. ಚುನಾವಣೆ ಮುಗಿದರೂ ಸಹ ರಾಮಚಂದ್ರಾಪುರ ಮಠದ ವಿಷಯವನ್ನು ಕೈಬಿಡುವುದಿಲ್ಲ. ಅದೊಂದು ಸಾರ್ವಜನಿಕ ಸಮಸ್ಯೆ. ಆ ಬಗ್ಗೆ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಬಂಗಾರಪ್ಪ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸಲು ಸಿದ್ಧ. ಇಂಥದ್ದೇ ಜವಾಬ್ದಾರಿ ನೀಡಿ ಎಂದು ನಾನು ಕೇಳಲು ಹೋಗುವುದಿಲ್ಲ ಎಂದು ಬಂಗಾರಪ್ಪ ನುಡಿದರು. ಪತ್ರಕರ್ತರು, ನೀವು ರಾಜ್ಯಪಾಲರಾಗುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದಾಗ, ಬಂಗಾರಪ್ಪ ನಗುತ್ತಲೇ, ಕರ್ನಾಟಕದ ರಾಜ್ಯಪಾಲ ಸ್ಥಾನಾನ? ಎಂದು ಮರು ಪ್ರಶ್ನೆ ಹಾಕಿದರು.
ದಂಡಾವತಿ ಯೋಜನೆ ಕುರಿತು ಪ್ರಶ್ನಿಸಿದಾಗ, ಯಡಿಯೂರಪ್ಪ ಹಠ ಮತ್ತು ಛಲಕ್ಕಾಗಿ ಅಧಿಕಾರ ಮಾಡುವುದನ್ನು ಕೈಬಿಡಲಿ. ಆಗ ದಂಡಾವತಿಯ ಸಮಸ್ಯೆ ಏನೆಂಬುದು ಅವರಿಗೆ ಅರ್ಥವಾಗುತ್ತದೆ. ಎಲ್ಲಾ ಅಣೆಕಟ್ಟುಗಳ ಫೋಟೋ ಹಾಕಿಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡ ದೊಡ್ಡ ಜಾಹೀರಾತುಗಳನ್ನು ತಾವೇ ನಿರ್ಮಿಸಿದವರಂತೆ ನಾಚಿಕೆ ಬಿಟ್ಟು ನೀಡುತ್ತಿದ್ದಾರೆ. ಇಷ್ಟೊಂದು ನಾಚಿಕೆಗೇಡಿನ ಪ್ರಚಾರ ಯಾವ ಮುಖ್ಯಮಂತ್ರಿಗಳ ಕಾಲದಲ್ಲಿಯೂ ಆಗಿರಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಿರುವುದು ನಿಜ. ಕಳೆದ ಲೋಕಸಭಾ ಚುನಾವಣೆಯಲ್ಲಿ 8 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ 8 ಸ್ಥಾನಗಳನ್ನಷ್ಟೇ ಪಡೆಯಿತು. ಈ ಮೂಲಕ ಕಾಂಗ್ರೆಸ್ನ ಶಕ್ತಿ ಏನೆಂಬುದು ತಿಳಿಯುವಂತಾಗಿದೆ. ಈಗಲಾದರೂ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications