ಪ್ರಕೃತಿ ನಿಯಮಕ್ಕೆ ತಲೆಬಾಗಿದ ಬಿದಿರ ರಾಶಿ

ಅತ್ತ ಸಾಗುವಾಗ ಗಮನಿಸಿದರೆ ಎಲ್ಲಿ ನೋಡಿದರಲ್ಲಿ ರಾಶಿ ರಾಶಿ ಬಿದಿರ ಮರಗಳು ಅನಾಥವಾಗಿ ಒಣಗಿ ನಿಂತಿರುವುದು ಎಂಥವರಿಗೂ ಆಶ್ಚರ್ಯದ ಜೊತೆ ಮರುಕ ಹುಟ್ಟಿಸುತ್ತದೆ. ಏಕೆಂದರೆ ಇದೆ ಬಿದಿರು ಹಸಿರಾಗಿದ್ದ ಕಾಲದಲ್ಲಿ ಇತ್ತ ಕಡೆ ಸಾಗುವಾಗ ಅಬ್ಬಾ... ಇದೆಂಥಾ ಬಿದಿರ ರಾಶಿಯಪ್ಪಾ ಎಲ್ಲಿ ನೋಡಿದರು ಬಿದಿರೇ ಕಾಣಿಸುತ್ತದೆ ಎಂಬುದರ ಜೊತೆಗೆ ಸೂರ್ಯನ ಕಿರಣವನ್ನು ನೋಡುವುದೇ ಕಷ್ಟ ಸಾಧ್ಯ. ಅಷ್ಟೊಂದು ದಟ್ಟ ಅರಣ್ಯ ಸಂಪತ್ತನ್ನು ಹೊಂದಿತ್ತು ಸಕ್ಕರೆಬೈಲು ಅರಣ್ಯ ಪ್ರದೇಶ. ಇಲ್ಲಿ ಸಾಗುವಾಗ ಸಾಗುವಾನಿ ಮರ ಬಿಟ್ಟರೆ ಬಿದಿರು ಮರಗಳ ಸಂಖ್ಯೆಯೇ ಹೆಚ್ಚಾಗಿತ್ತು.
ಆದರೆ, ಇಂದಿನ ಪರಿಸ್ಥಿತಿ ಬದಲಾಗಿದ್ದು, ಕಾಡು ಅರೆಬೆತ್ತಲಾಗಿ ಕಾಣಿಸುತ್ತಿದೆ. ಬಿದಿರು ಸಂಪೂರ್ಣವಾಗಿ ಒಣಗಿ ನಿಂತಿದ್ದು, ಇಲ್ಲಿರುವ ಆನೆಗಳಿಗೆ ಆಹಾರವಾಗಿದ್ದ ಪ್ರಾಣಿಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಬಿದಿರು ಇಲ್ಲದಂತಾಗಿದೆ. ಹೀಗೇಕೆ ಬಿದಿರು ಸಂಪೂರ್ಣವಾಗಿ ಒಣಗಿದೆಂಬುದಕ್ಕೆ ಕಾರಣ ತಿಳಿಯಲು ಇಲ್ಲಿನ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿಯಾಗಿರುವ ಸ್ಮಿತಾ ಬಜ್ಜೂರ್ರವರನ್ನು ಸಂಪರ್ಕಿಸಿದಾಗ ತಿಳಿದುಬಂದ ಮಾಹಿತಿ ಏನೆಂದರೆ, ಹುಲ್ಲಿನ ಜಾತಿಗೆ ಸೇರಿದ ಬಿದಿರು ಮರಗಳ ಜೀವಿತಾವಧಿಯೇ 60ರಿಂದ 65ವರ್ಷ. ಇಷ್ಟು ವರ್ಷ ಬದುಕಿದ್ದು, ನಂತರ ಹೂ ಬಿಟ್ಟು ಬಿದಿರ ಅಕ್ಕಿಯಾಗಿ ನಂತರ ಒಣಗಿ ಹೋಗುತ್ತದೆಂದು ತಿಳಿಸಿದರು. ಪ್ರಕೃತಿ ನೀಡಿರುವ ಆಯುಷ್ಯ 60 ವರ್ಷವಾಗಿರುವಾಗ ಇದನ್ನು ಯಾರಿಂದಲೂ ತಡೆಗಟ್ಟಲು ಸಾಧ್ಯವಾಗಲಾರದು.
ಅವರೇ ಹೇಳುವಂತೆ ಇನ್ನು ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಮತ್ತೆ ಬಿದಿರು ತಾನಾಗಿಯೇ ಬೆಳೆಯಲಿದ್ದು, ಹಿಂದಿದ್ದಂತೆ ದೊಡ್ಡದಾಗಿ ಬೆಳೆಯಲು 15ರಿಂದ 20 ವರ್ಷಗಳಷ್ಟು ಕಾಲ ಬೇಕಾಗಬಹುದೆಂದು ವಿವರಿಸಿದರು. ಒಣಗಿ ನಿಂತಿರುವ ಬಿದಿರಿನಿಂದ ಒಂದು ಸಮಸ್ಯೆಯೆಂದರೆ ಸ್ವಲ್ಪ ಬೆಂಕಿ ಬಿದ್ದರೂ ಅಪಾರ ಪ್ರಮಾಣದ ವನ್ಯ ಸಂಪತ್ತು, ವನ್ಯ ಜೀವಿಗಳು ನಾಶವಾಗುವ ಭೀತಿಯನ್ನು ವ್ಯಕ್ತಪಡಿಸಿದರು.
ಅಂದಾಜು ಸುಮಾರು 3320 ಟನ್ಗಳಷ್ಟು ಬಿದಿರು ಒಣಗಿನಿಂತಿದ್ದು, ಅವುಗಳನ್ನು ಮಾರಾಟ ಮಾಡಿದ್ದರೆ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ.ಗಳಷ್ಟು ಆದಾಯ ಬರುತ್ತಿತ್ತು. ಆದರೆ, ಸಂರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದಾಗಿ, ಒಂದು ಸಣ್ಣ ಕಡ್ಡಿಯನ್ನೂ ಆದಾಯ ಪಡೆಯುವ ದೃಷ್ಟಿಯಿಂದ ಮಾರುವಂತಿಲ್ಲ. ಜೊತೆಗೆ ಒಣಗಿದ ಬಿದಿರನ್ನು ಅಲ್ಲಿಂದ ತೆಗೆದರೆ ಅಲ್ಲಿರುವ ಹುಳು, ಹುಪ್ಪಟೆಗಳು ನಾಶವಾಗುವ ಸಂಭವವಿದ್ದು, ರಕ್ಷಿತ ಅರಣ್ಯ ಪ್ರದೇಶದಿಂದ ಆದಾಯಕ್ಕಾಗಿ ಯಾವುದೇ ವಸ್ತವನ್ನು ಸಾಗಾಣೆ ಮಾಡಬೇಕಾದರೆ ಕೇಂದ್ರ ಸರಕಾರದ ಅನುಮತಿ ಪಡೆಯಬೇಕು. ಇದು ಸರಕಾರದ ನಿಯಮ.
ಹೀಗಾಗಿ ಇಲಾಖೆಯವರು ಒಣಗಿದ ಬಿದಿರನ್ನು ಸಾಗಿಸಲು ಸರಕಾರಕ್ಕೆ ಈಗಾಗಲೇ ಮನವಿ ಮಾಡಿದ್ದರು. ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ ರಾಶಿ ರಾಶಿ ಬಿದಿರು ನಾಶವಾಗುವ ಸಂಭವವೇ ಹೆಚ್ಚಾಗಿದೆ. ಜೊತೆಗೆ ಒಣಗಿದ ಬಿದಿರು ಯಾವ ಉಪಯೋಗಕ್ಕೂ ಬರುವುದಿಲ್ಲ. ಒಣಗುವ ಮೊದಲೇ ಇದನ್ನು ಪೇಪರ್ ಕಾರ್ಖಾನೆಗೆ, ಇತರೇ ಗೃಹಪಯೋಗಿ ವಸ್ತುಗಳ ನಿರ್ಮಾಣಕ್ಕೆ ಕೊಟ್ಟಿದ್ದರೆ ಉಪಯೋಗಕ್ಕೆ ಬರುತ್ತಿತ್ತು. ಆದರೆ, ಸರಕಾರಕ್ಕೆ ಇದ್ಯಾವುದೂ ಗಮನಕ್ಕೆ ಬರಲಿಲ್ಲ. ಕೋಟ್ಯಾಂತರ ರೂ. ಮೌಲ್ಯದ ಬಿದಿರು ಸಂಪೂರ್ಣ ನಾಶವಾಗಿದೆ.
ಒಂದು ಕಡೆ ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದರೆ, ಈಗ ಪ್ರಕೃತಿಯ ನಿಯಮಕ್ಕನುಸಾರವಾಗಿ ನಾಶಹೊಂದುವಂತಾಗಿದೆ. ಇದರಿಂದಾಗಿ ಎಷ್ಟೋ ಜೀವ ಸಂಕುಲಗಳಿಗೆ ಆಶ್ರಯ ತಾಣವಾಗಿದ್ದ, ಆನೆಗಳಿಗೆ ಆಹಾರದ ವಸ್ತುವಾಗಿದ್ದ, ಪ್ರಯಾಣಿಕರಿಗೆ ಸ್ವಾಗತ ನೀಡುವಂತಿದ್ದ ಹಚ್ಚ ಹಸಿರ ಬಿದಿರ ಕಾಡು ನಮ್ಮಿಂದ ಮರೆಯಾಗಿದೆ. ಮತ್ತೆ ತನ್ನ ಗತ ವೈಭವವವನ್ನು ಪಡೆಯಲು ಎಷ್ಟು ವರ್ಷಗಳು ಬೇಕೋ... ಯಾರೇ ಆಗಲಿ ಪ್ರಕೃತಿ ನಿಯಮಕ್ಕೆ ತಲೆಬಾಗಲೇ ಬೇಕಲ್ಲ?
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications