ಅಣು ಮಾಹಿತಿ ಸೋರಿಕೆಯಾಗಿಲ್ಲ;ನಾಗೇಶ್ವರರಾವ್

ಈ ಮಧ್ಯೆ, ಕೈಗಾ ಅಣು ಸ್ಥಾವರದ ವಿಜ್ಞಾನಿ ಮಹಾಲಿಂಗಂ ಬಳಿ ಸ್ಥಾವರಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಅವರ ಬಳಿ ಇರಲಿಲ್ಲ ಎಂದು ಭಾರತೀಯ ಅಣುಶಕ್ತಿ ನಿಗಮದ ಅಧ್ಯಕ್ಷ ಸಿ ನಾಗೇಶ್ವರ ರಾವ್ ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ, ಕೇಂದ್ರದ ಸಿಐಎಸ್ಎಫ್ ತಂಡ, ರಾಜ್ಯ ಪೊಲೀಸರು ಮತ್ತು ಸ್ಥಳೀಯ ಜನರ ಸಹಾಯದ ಮೂಲಕ ಮಹಾಲಿಂಗಂ ಅವರನ್ನು ಪತ್ತೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೈಗಾ ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು, ಅಲ್ಲಿ ಕೂಡಾ ಹುಡುಕಾಟ ನಡೆಸಲಾಗುವುದು. ಆದರೆ ಒಂದು ಮಾತು ಸತ್ಯ, ಅಣುಸ್ಥಾವರಕ್ಕೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಮತ್ತೊಮ್ಮೆ ನಾಗೇಶ್ವರರಾವ್ ದೃಡಪಡಿಸಿದರು. ಮಹಾಲಿಂಗಂ ಅವರ ವಿಜ್ಞಾನಿಯಾಗಿದ್ದರೂ ಹೊಸ ಉದ್ಯೋಗಿಗಳಿಗೆ ತರಬೇತಿಯನ್ನು ನೀಡುತ್ತಿದ್ದರು. ಆದ್ದರಿಂದ ಅಣು ಮಾಹಿತಿ ಸೋರಿಕೆಯಾಗಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications