ತಾಲಿಬಾನ್ ಉಗ್ರರೊಂದಿಗೆ ಐಎಸ್ಐ ನಂಟು
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಲೂಚಿಸ್ತಾನದ ಬಂಡುಕೋರರಿಗೆ ಭಾರತದ ರಾ ಸಂಸ್ಥೆ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಅಪಘಾನಿಸ್ತಾನದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಬೈತುಲ್ಲಾ ಮೆಹಸೂದ್ ನೇತೃತ್ವದ ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಾಗ ಸಿರಾಜುದ್ದೀನ್ ಹಖ್ಖಾನಿ ಅವರ ಪ್ರಭಾವದ ಮೇಲೆ ಐಎಸ್ಐ ಬಿಡುಗಡೆಗೊಳಿಸಲಾಗಿತ್ತು. ಅಲ್ಲದೇ ಸಿರಾಜುದ್ದೀನ್ ಹಖ್ಖಾನಿ ಅವರ ಮಗ ಜಲಾಲುದ್ದೀನ್ ಹಖ್ಖಾನಿ ಅಪಘಾನಿಸ್ತಾನದ ತಾಲಿಬಾನ್ ಉಗ್ರರ ಮುಖಂಡತ್ವವನ್ನು ವಹಿಸಿಕೊಂಡಿದ್ದಾನೆ. ಈ ಮೂಲಕ ಐಎಸ್ಐ ಅಪಘಾನಿಸ್ತಾನದ ರಾಯಭಾರಿ ಕಚೇರಿಯನ್ನು ಬಿಡುಗಡೆಗೊಳಿಸಿದ್ದು, ತೆಹ್ರೀಕ್ ಇ ತಾಲಿಬಾನ್ ಎಂಬವ ಉಗ್ರ ಸಂಸ್ಥೆಯನ್ನು ಹುಟ್ಟು ಹಾಕಿರುವ ಬೈತುಲ್ಲಾ ಮೆಹಸೂದ್ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನೆಜೀರ್ ಭುಟ್ಟೋ ಅವರನ್ನು ಹತ್ಯೆ ಮಾಡಿದ್ದು ಎಂದು ಮುಷರಫ್ ಹೇಳಿದ್ದಾರೆ.
ಪಾಕಿಸ್ತಾನದ ಪರಮಾಣು ಅಸ್ತ್ರಗಳು ತಾಲಿಬಾನ್ ಉಗ್ರರ ಕೈವಶದಲ್ಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸದ್ಯದ ಮಟ್ಟಿಗೆ ಪಾಕ್ ಸರಕಾರದ ಸುಪರ್ದಿಯಲ್ಲಿದೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಉಗ್ರರು ಏನಾದರೂ ಮಾಡುವುದಿಲ್ಲ ಎನ್ನುವುದನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.
(ಏಜನ್ಸೀಸ್)